ನವದೆಹಲಿ: ಅಪ್ರತಿಮ ದೇಶಭಕ್ತ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿಗಳು ಸ್ವಾತಂತ್ರ್ಯ ಸೇನಾನಿಗೆ ಗೌರವಾರ್ಪಣೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ‘ನೇತಾಜೀ ಸುಭಾಷ್ ಚಂದ್ರ ಬೋಸರು ಅತ್ಯಂತ ಅಚ್ಚುಮೆಚ್ಚಿನ ರಾಷ್ಟ್ರ ನಾಯಕ ಮತ್ತು ಸ್ವಾತಂತ್ರ್ಯ ಚಳುವಳಿಯ ಐಕಾನ್ ಆಗಿ ಉಳಿಯಲಿದ್ದಾರೆ’ ಎಂದಿದ್ದಾರೆ.
ಇಂದು ಇಡೀ ದೇಶ ಅವರನ್ನು ಕಳೆದುಕೊಂಡ ಭಾವದಲ್ಲಿದೆ, ಅವರ ಸ್ಮರಣೆಯಲ್ಲಿದೆ ಎಂದಿದ್ದಾರೆ.
ಉಪರಾಷ್ಟ್ರವತಿ ವೆಂಕಯ್ಯ ನಾಯ್ಡು ಟ್ವಿಟ್ ಮಾಡಿ, ‘ನೇತಾಜೀ ಅವರ ನಾಯಕತ್ವ, ದೂರದೃಷ್ಟಿತ್ವ ಮತ್ತು ದೇಶಕ್ಕಾಗಿನ ಸಮರ್ಪಣಾ ಭಾವಕ್ಕೆ ತಾನು ತಲೆ ಬಾಗುವುದಾಗಿ’ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿ, ‘ಭಾರತವನ್ನು ಸ್ವತಂತ್ರವಾಗಿಸಿ, ಘನತೆಯುತ ಬದುಕನ್ನು ಬಾಳುವಂತೆ ಮಾಡಲು ಕಟಿಬದ್ಧರಾಗಿದ್ದ ಮಹನೀಯ’ ಎಂದಿದ್ದಾರೆ. ಅವರ ಸಿದ್ಧಾಂತ, ಆದರ್ಶಗಳ ಪಾಲನೆಗೆ, ಬಲಿಷ್ಠ ಭಾರತ ನಿರ್ಮಾಣಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದಿದ್ದಾರೆ.
ನೇತಾಜೀ ಅವರು 1897ರ ಜನವರಿ 23ರಂದು ಕಟಕ್ನಲ್ಲಿ ಜನಿಸಿದರು.
I bow to Netaji Subhas Chandra Bose on his Jayanti.
He was a stalwart who committed himself towards ensuring India is free and leads a life of dignity. We are committed to fulfilling his ideals and creating a strong India. pic.twitter.com/QpE967nuUH
— Narendra Modi (@narendramodi) January 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.