ನವದೆಹಲಿ: ಲಂಡನ್ನಲ್ಲಿ ನಡೆದ ಇವಿಎಂ ಹ್ಯಾಕಥಾನ್ನಲ್ಲಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರ ಪ್ರಸ್ತುತತೆಯನ್ನು ಬಿಜೆಪಿ ಪ್ರಶ್ನಿಸಿದೆ. ಮಾತ್ರವಲ್ಲ ಈ ಹ್ಯಾಕಥಾನನ್ನು ನಡೆಸಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದೆ.
‘ಕಪಿಲ್ ಸಿಬಲ್ ಅಲ್ಲೇನು ಮಾಡುತ್ತಿದ್ದರು? ಯಾವ ಸಾಮರ್ಥ್ಯದ ಮೇಲೆ ಅವರ ಅಲ್ಲಿದ್ದರು? ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಅವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎಂಬುದಾಗಿ ನಂಬಿದ್ದೇವೆ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
‘ಭಾರತದ ಜನಪ್ರಿಯ ಜನಾದೇಶವನ್ನು ಅವಮಾನಿಸಲು ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಆಯೋಜನೆಗೊಳಿಸಿತ್ತೇ? 2019ರ ತನ್ನ ಸೋಲನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಈಗಿನಿಂದಲೇ ಸಜ್ಜಾಗುತ್ತಿದೆ’ ಎಂದಿದ್ದಾರೆ.
ಲಂಡನ್ನಲ್ಲಿ ಪ್ರೆಸ್ ಕಾನ್ಫರೆನ್ಸ್ನ್ನು ಸ್ಕೈಪೆಯಲ್ಲಿ ಉದ್ದೇಶಿಸಿ ಮಾತನಾಡಿದ್ದ ಸೈಯದ್ ಶುಜಾ ಎಂಬಾತ, 2014ರ ಚುನಾವಣೆಯನ್ನು ಇವಿಎಂ ಮೂಲಕ ರಿಗ್ ಮಾಡಲಾಗಿತ್ತು. ನಮ್ಮ ನಾಯಕರ ಕೊಲೆಯ ಹಿನ್ನಲೆಯಲ್ಲಿ ಬೆದರಿ ನಾನು ಬಳಿಕ ದೇಶ ತೊರೆದ ಎಂದಿದ್ದಾನೆ.
ಶುಜಾ ಪ್ರತಿಕ್ರಿಯೆ ವಿರುದ್ಧ ಮಾತನಾಡಿರುವ ಪ್ರಸಾದ್, ‘2014ರಲ್ಲಿ ಯುಪಿಎ ಅಧಿಕಾರದಲ್ಲಿತ್ತೇ ಹೊರತು ನಾವಲ್ಲ. ನಾವು ಅಧಿಕಾರದಲ್ಲಿ ಇಲ್ಲದ ವೇಳೆಯಲ್ಲಿ ಹ್ಯಾಕ್ ಮಾಡಿದ್ದೇವೆ ಎಂಬುದರಲ್ಲಿ ಯಾವ ಲಾಜಿಕ್ ಇದೆ’ ಎಂದು ಪ್ರಶ್ನಿಸಿದ್ದಾರೆ.
ಅರುಣ್ ಜೇಟ್ಲಿಯವರೂ ಶುಜಾ ಹೇಳಿಕೆಗೆ ತಿರುಗೇಟು ನೀಡಿದ್ದು, ’ರಫೆಲ್ ಬಳಿಕ, 15 ಕೈಗಾರಿಕೋದ್ಯಮಿಗಳ ಸಾಲಮನ್ನಾದ ಬಳಿಕ ಇದೀಗ ಇವಿಎಂ ಹ್ಯಾಕ್ ಕಾಂಗ್ರೆಸ್ನ ಮತ್ತೊಂದು ಸುಳ್ಳು’ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.