ಲಕ್ನೋ: ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಂ ರಿಝ್ವಿ ಅವರು, ಮುಸ್ಲಿಮ್ ಸಮುದಾಯವನ್ನೇ ಕಣಕುವಂತಹ ಹೇಳಿಕೆ ನೀಡಿದ್ದಾರೆ.
ಮರದಸಗಳು ಇಸಿಸ್ ಸಿದ್ಧಾಂತವನ್ನು ಪ್ರತಿಪಾದಿಸುತ್ತಿವೆ, ಹೀಗಾಗೀ ದೇಶ ಎಲ್ಲಾ ಮದರಸಗಳನ್ನೂ ಮುಚ್ಚಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.
‘ಒಂದು ವೇಳೆ ಇನ್ನು 15 ವರ್ಷದಲ್ಲಿ ಮದರಸಗಳು ಮುಚ್ಚಲ್ಪಡದಿದ್ದರೆ, ಅರ್ಧದಷ್ಟು ಮುಸ್ಲಿಮರು ಇಸಿಸ್ ಬೆಂಬಲಿಗರಾಗುತ್ತಾರೆ. ವಿಶ್ವದಾದ್ಯಂತ ಈ ಸಂಘಟನೆ ಪ್ರಭಾವ ಬೀರುತ್ತಿದೆ. ಮಕ್ಕಳನ್ನು ಇವರು ಟಾರ್ಗೆಟ್ ಮಾಡುತ್ತಿದ್ದಾರೆ. ವಿಶ್ವದ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಭದ್ರಕೋಟೆಯನ್ನು ರಚಿಸಲು ಇವರು ಹವಣಿಸುತ್ತಿದ್ದಾರೆ’ ಎಂದಿದ್ದಾರೆ.
ಮದರಸಗಳಿಗೆ ಹೋಗುವ ಮಕ್ಕಳನ್ನು ಮುಖ್ಯ ವಾಹಿನಿಯ ಶಿಕ್ಷಣದಿಂದ ವಂಚಿತಗೊಳಿಸಲಾಗುತ್ತಿದೆ. ಇತರ ಧರ್ಮಗಳಿಂದ ಅವರನ್ನು ದೂರವಿರಿಸಲಾಗುತ್ತದೆ. ಇಸ್ಲಾಂ ಹೆಸರಿನಲ್ಲಿ ಉಗ್ರವಾದಿ ಮನೋಭಾವವನ್ನು ಬೆಳೆಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.