ವಾರಣಾಸಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 15ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಉದ್ಘಾಟನೆಗೊಳಿಸಿದರು. ಇದೇ ಮೊದಲ ಬಾರಿಗೆ, ಜ.21ರಿಂದ 23ರವರೆಗೆ ಮೂರು ದಿನಗಳ ಸಮಾವೇಶವನ್ನು ಆಯೋಜನೆಗೊಳಿಸಲಾಗಿದೆ. ಸುಮಾರು 5 ಸಾವಿರ ಅನಿವಾಸಿ ಭಾರತೀಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಕುಂಭ ಮೇಳ, ಗಣರಾಜ್ಯೋತ್ಸವ ಪರೇಡ್ನ್ನೂ ಇವರು ವೀಕ್ಷಣೆ ಮಾಡಲಿದ್ದಾರೆ.
‘ನವ ಭಾರತದ ನಿಮಾರ್ಣದಲ್ಲಿ ಅನಿವಾಸಿ ಭಾರತೀಯರ ಪಾತ್ರ’ ಎಂಬ ಥೀಮ್ನೊಂದಿಗೆ ಈ ಬಾರಿಯ ಪ್ರವಾಸಿ ದಿವಸ್ ಸಮಾವೇಶವನ್ನು ಆಯೋಜನೆಗೊಳಿಸಲಾಗಿದೆ, ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜಗನೌಥ್ ಈ ಬಾರಿಯ ಮುಖ್ಯ ಅತಿಥಿಗಳಾಗಿದ್ದಾರೆ. ನಾರ್ವೇ ಸಂಸತ್ ಸದಸ್ಯ ಹಿಮಾಂಶು ಗುಲಾಟಿಯವರು ವಿಶೇಷ ಅತಿಥಿಯಾಗಿದ್ದಾರೆ.
ಸಮಾವೇಶ ಉದ್ಘಾಟಿಸಿದ ಬಳಿಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನೀವು ಯಾವುದೇ ದೇಶದಲ್ಲಿ ವಾಸಿಸುತ್ತಿದ್ದರೂ, ಸಮಾಜದ ಪ್ರತಿ ವಲಯದಲ್ಲೂ ನಾಯಕತ್ವವನ್ನು ಪ್ರದರ್ಶಿಸಿದ್ದೀರಿ. ಮಾರಿಷಿಯಸ್ ಪಿಎಂ ಪ್ರವಿಂದ್ ಜಗನೌಥ್ ಅವರು ಪ್ರಚಾರ ಪಡಿಸುತ್ತಿದ್ದಾರೆ’ ಎಂದರು.
ಪೋರ್ಚುಗಿಲ್, ತ್ರಿನಿಡ-ಟೊಬಗೊ ಮತ್ತು ಐರ್ಲೆಂಡ್ಗಳು ಭಾರತೀಯ ಮೂಲವುಳ್ಳ ನಾಯಕತ್ವವನ್ನು ಕಂಡಿವೆ. ಅಟಲ್ ಜೀ ಅವರು ಆರಂಭಿಸಿದ ಅಭಿಯಾನದ ಮೂಲಕ ವಿಶ್ವದಾದ್ಯಂತ ಇರುವ ಭಾರತೀಯರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ ಎಂದರು.
ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಸಂತಾಪವನ್ನು ಸೂಚಿಸಿ ಅವರು ಮಾತು ಆರಂಭಿಸಿದ್ದು ವಿಶೇಷವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.