ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ತಮ್ಮ ಸರ್ಕಾರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ, ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು ಉದ್ಯಮ ಸ್ನೇಹಿಯನ್ನಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೊದಿ ಹೇಳಿದ್ದಾರೆ.
ವೈಬ್ರಂಟ್ ಗುಜರಾತ್ ಸಮಿತ್ನಲ್ಲಿ ಮಾತನಾಡಿದ ಅವರು, ‘ಕಳೆದ ನಾಲ್ಕು ವರ್ಷಗಳಲ್ಲಿ, ವಿಶ್ವಬ್ಯಾಂಕ್ನ ಸುಲಲಿತ ಉದ್ಯಮದ ಜಾಗತಿಕ ರ್ಯಾಂಕಿಂಗ್ನಲ್ಲಿ ಭಾರತ 65ನೇ ಸ್ಥಾನವನ್ನು ಏರಿಸಿಕೊಂಡಿದೆ. ಆದರೂ ನಮಗೆ ತೃಪ್ತಿ ಇಲ್ಲ. ನನ್ನ ತಂಡಕ್ಕೆ ಇನ್ನೂ ಹೆಚ್ಚಿನ ಪರಿಶ್ರಮ ಹಾಕುವಂತೆ ಹೇಳಿದ್ದೇನೆ. ಮುಂದಿನ ವರ್ಷ ಟಾಪ್ 50ರಲ್ಲಿ ಕಾಣಿಸಿಕೊಳ್ಳಲಿದ್ದೇವೆ’ ಎಂದಿದ್ದಾರೆ.
‘ಭಾರತದಲ್ಲಿ ಹಣ ಹೂಡಲು ಇದು ಅತ್ಯುತ್ತಮ ಸಮಯ’ ಎಂದು ಜಾಗತಿಕ ಹೂಡಿಕೆದಾರರಿಗೆ ಅವರು ತಿಳಿಸಿದ್ದಾರೆ.
ಜಿಎಸ್ಟಿ ಮತ್ತು ಇತರ ತೆರಿಗೆ ಸರಳಿಕರಣ ಕ್ರಮಗಳ ಮೂಲಕ ನಾವು ಉದ್ಯಮ ಮಾಡುವ ವೆಚ್ಚವನ್ನು ಕಡಿತಗೊಳಿಸಿದ್ದೇವೆ. ವಹಿವಾಟು ದರವನ್ನೂ ಕಡಿತ ಮಾಡಿದ್ದು, ಪ್ರಕ್ರಿಯೆಯನ್ನು ಸಮರ್ಪಕಗೊಳಿಸಿದ್ದೇವೆ ಎಂದಿದ್ದಾರೆ.
ಡಿಜಿಟಲ್ ಪ್ರಕ್ರಿಯೆ ಮತ್ತು ಸಿಂಗಲ್ ಪಾಯಿಂಟ್ ಇಂಟರ್ಫೇಸ್ ಮೂಲಕ ಉದ್ಯಮ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.