ನವದೆಹಲಿ: 2015, 2016, 2017 ಮತ್ತು 2018ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಘೋಷಣೆ ಮಾಡಲಾಗಿದ್ದು, ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿರುವ ಸಂಸ್ಥೆಗಳು ಈ ಪುರಸ್ಕಾರಕ್ಕೆ ಪಾತ್ರವಾಗಿವೆ.
2015ನೇ ಸಾಲಿನ ಗಾಂಧೀ ಶಾಂತಿ ಪುರಸ್ಕಾರವನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರಕ್ಕೆ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗಳಿಗೆ ಕೊಡುಗೆ ನೀಡಿದ್ದಕ್ಕಾಗಿ ಈ ಪುರಸ್ಕಾರ ಈ ಸಂಸ್ಥೆಗೆ ಸಂದಿದೆ.
2016ನೇ ಸಾಲಿನ ಪುರಸ್ಕಾರ, ದೇಶದಾದ್ಯಂತ ಮಧ್ಯಾಹ್ಮದ ಬಿಸಿಯೂಟ ಪೂರೈಸುವ ಅಕ್ಷಯಪಾತ್ರ ಫೌಂಡೇಶನ್ಗೆ ಮತ್ತು ದೇಶದಲ್ಲಿ ನೈರ್ಮಲ್ಯ ವೃದ್ಧಿಸುತ್ತಿರುವ ಸುಲಭ್ ಇಂಟರ್ನ್ಯಾಷನಲ್ಗೆ ಜಂಟಿಯಾಗಿ ಸಿಕ್ಕಿದೆ.
2017ನೇ ಸಾಲಿನ ಪುರಸ್ಕಾರ, ಗ್ರಾಮೀಣ ಮತ್ತು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಎಕಲ್ಅಭಿಯಾನ್ ಟ್ರಸ್ಟ್ಗೆ ಸಿಕ್ಕಿದೆ.
2018ನೇ ಸಾಲಿನ ಪುರಸ್ಕಾರ, ಕುಷ್ಠರೋಗದ ಬಗ್ಗೆ ದೇಶ, ವಿದೇಶದಲ್ಲಿ ಅರಿವು ಮೂಡಿಸುತ್ತಿರುವ ಶ್ರೀ ಯೊಹೇಸಸಕವ ಸಂಸ್ಥೆಗೆ ಸಿಕ್ಕಿದೆ.
ಪ್ರಧಾನಿ ನೇತೃತ್ವದ, ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ಸ್ಪೀಕರ್ ಸುಮಿತ್ರಾ ಮಹಾಜನ್, ಮಲ್ಲಿಕಾರ್ಜುನ ಖರ್ಗೆ, ಎಲ್ಕೆ ಅಡ್ವಾಣಿಯನ್ನೊಳಗೊಂಡ ಜ್ಯೂರಿಗಳ ತಂಡ ಗಾಂಧಿ ಶಾಂತಿ ಪುರಸ್ಕಾರಕ್ಕೆ ಅರ್ಹರನ್ನು ಆಯ್ಕೆಗೊಳಿಸಿದೆ.
source: PTI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.