ಒಂದು ಪ್ರಗತಿಶೀಲ ವಾತಾವರಣದ ಮಧ್ಯವರ್ಗದ ಕುಟುಂಬದಲ್ಲಿ ಹುಟ್ಟಿ, ಬೆಳೆದವನಾಗಿ ಬಾಲ್ಯದಿಂದಲೂ ಹಲವಾರು ಸಂಘಸಂಸ್ಥೆಗಳನ್ನು ನೋಡಿದ್ದೇನೆ. ಕೆಲವರು ಶಾಖಾಗಳಿಗೆ ತೆರಳಿದರೆ, ಕೆಲವರು ಯೂನಿಯನ್ ಸಭೆಗಳಿಗೆ ತೆರಳುತ್ತಿದ್ದರು. ಅನ್ಸಾರಿ ಅಂಕಲ್ನಿಂದ ಈಡಿ ಪಡೆಯಲು ಮತ್ತು ನನ್ನ ಅಚ್ಚುಮೆಚ್ಚಿನ ಸೆವಾಯ್ ಸವಿಯಲು ಇಡೀ ವರ್ಷ ನಾನು ಕಾದು ಕುಳಿತಿದ್ದೇನೆ. ದುರ್ಗಾಪೂಜೆ, ದಿವಾಳಿಗಳಿಗೂ ಕಾತುರದಿಂದ ಕಾದಿದ್ದೇನೆ, ಮಿ.ಶೇವ್ಸ್ ಅವರ ಮನೆಯ ಯಮ್ಮಿ ಪ್ಲಮ್ ಕೇಕ್ನಲ್ಲಿ ಪಾಲನ್ನೂ ಪಡೆದುಕೊಂಡಿದ್ದೇನೆ. ಬೆಳೆಯುತ್ತಾ ಹೋದಂತೆ ಬಹುತ್ವ ಅದ್ಭುತ, ಕಮ್ಯೂನಿಸಂ ಸೂಕ್ತ, ತರ್ಕಬದ್ಧ ಎನಿಸಿತು. ಫ್ರೆಂಚ್ ಕ್ರಾಂತಿ ಕಾನೂನುಬದ್ಧ ಮತ್ತು ಅರ್ಥಶಾಸ್ತ್ರ ಕಳಾಹೀನ ಎನಿಸಿತು. ವಾಸ್ತುಶಿಲ್ಪದ ಶಾಲೆಗೆ ಪ್ರವೇಶಪಡೆಯುತ್ತಿದ್ದಂತೆ ಪ್ರಗತಿಪರತೆ ಬದುಕುಳಿಯುವ ಮಾರ್ಗವೆನಿಸಿತು. ಆರ್ಚ್ ಸ್ಕೂಲ್ ಪ್ರಗತಿಯನ್ನು ಮೀರಿದ ಪ್ರಗತಿಯನ್ನು ಮಾತ್ರ ಕಲಿಸುತ್ತಿತ್ತು. ಒಂದೊಂದು ಸೆಮಿಸ್ಟರ್ನಲ್ಲೂ ಇಸ್ಲಾಂ, ರೋಮನ್, ಗ್ರೀಕರ ವಾಸ್ತುಶಿಲ್ಪದ ಬಗ್ಗೆ ಕಲಿಸುತ್ತಿತ್ತು. ಆದರೆ ಭಾರತದ ಅದ್ಭುತ ದೇಗುಲಗಳ ಬಗ್ಗೆ ವಿವರಿಸಲು ಅದು ವಿಫಲವಾಗಿತ್ತು. ಕಮ್ಯೂನಿಸಂನಿಂದ ಪ್ರೇರಿತಗೊಂಡ ಕೂಸು ಪದವಿಪೂರ್ವ ಶಿಕ್ಷಣದಲ್ಲಿ ಕೇವಲ ಪಾಶ್ಚಿಮಾತ್ಯದ ವೈಭವೀಕರಣವನ್ನು ಮಾತ್ರ ಕಲಿತಿರುತ್ತದೆ, ಕೆಂಪು ಮಾತ್ರ ನಿಖರವಾದುದು ಎಂದು ನಂಬಿರುತ್ತದೆ. ನಾನೂ ಮಾವೋ, ಲೆನಿನ್, ಮಾರ್ಕ್ಸ್ನ್ನು ಓದಿದೆ. ಭಾರತೀಯ ಸಮಾಜ ಪಶ್ಚಿಮ ಮತ್ತು ಮಾಕ್ಸಿಸಂನಿಂದ ವಿಭಿನ್ನವಾಗಿ ಕಾಣಲಿಲ್ಲ. ನಾನು ವಿದ್ಯಾರ್ಥಿ ನಾಯಕನಾಗಿ ಬದಲಾದೆ, ಆಡಳಿತ ಮತ್ತು ಯೂನಿವರ್ಸಿಟಿ ವಿರುದ್ಧದ ಹೋರಾಟದ ಭಾಗವಾದೆ. ‘ರಿಸ್ಟಾರ್ಟ್ ಆನ್ ಆರ್ಕಿಟೆಕ್ಟ್ಸ್ ಜರ್ನಿ ಟು ದ ಪಾರ್ಲಿಮೆಂಟ್ ಹೌಸ್ ’ ಮತ್ತು ’ಕ್ರಾಸಿಂಗ್ ದ ಲೈನ್ ’ ಎಂಬ ಎರಡು ಪುಸ್ತಕ ಬರೆದೆ. ಮೊದಲನೇಯದರಲ್ಲಿ ರಾಜಕೀಯದಲ್ಲಿ ವಿದ್ಯಾರ್ಥಿಗಳ ಪಾತ್ರ, ಎರಡನೇಯದರಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸುವ ರಾಜಕಾರಣಿಯ ಜವಾಬ್ದಾರಿಯ ಬಗ್ಗೆ ಬರೆದೆ. ಎರಡು ಕೂಡ ಎಡ ಪ್ರೇರಿತ ಎನ್ನಲು ನನಗೆ ನಾಚಿಕೆ ಇಲ್ಲ. ಎಡ ವಿಷಯಗಳು ನನ್ನನು ಪರಿವರ್ತನೆಗೊಳಿಸುತ್ತಿರುವಾಗ ಗೋಧ್ರಾ ಘಟನೆ ದಶಕದಷ್ಟೂ ಹಳೆಯದ್ದಾಗಿರಲಿಲ್ಲ. ಹೀಗಾಗಿ ಮೋದಿ ಸಮೂಹ ಹಂತಕ ಮತ್ತು ಬಿಜೆಪಿ ದ್ವೇಷ ಪ್ರಚಾರಕ ಎಂಬುದನ್ನು ನಂಬಿದ್ದೆ.
ಆ ವೇಳೆ ಯುಪಿಎ ಆಡಳಿತ ಭ್ರಷ್ಟಾಚಾರ ಆರೋಪಗಳಲ್ಲಿ ಮುಳುಗಿತ್ತು ಮತ್ತು ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯು ಜನ ಬೆಂಬಲವನ್ನು ಪಡೆದುಕೊಂಡಿತ್ತು. ನನ್ನೊಳಗಿನ ಕುದಿಯುತ್ತಿದ್ದ ‘ಕೆಂಪು’ ಹೋರಾಟಗಾರ ಆ ಚಳವಳಿಯ ಭಾಗವಾದ ಮತ್ತು ಅಣ್ಣಾ ಹಜಾರೆಗಿಂತಲೂ ಅರವಿಂದ್ ಕೇಜ್ರಿವಾಲ್ ನನಗೆ ಒರ್ವ ನ್ಯಾಯಪರ ನಾಯಕನಂತೆ ಕಾಣಿಸಿಕೊಂಡರು. ನನ್ನ ಪುಸ್ತಕ ‘ಕ್ರಾಸಿಂಗ್ ದ ಲೈನ್’ನ ಹೋರಾಟಗಾರನೊಂದಿಗೆ ಇವರನ್ನು ನಾನು ಹೋಲಿಕೆ ಮಾಡುತ್ತಿದೆ .ನಾನು ಆಮ್ ಆದ್ಮಿ ಪಾರ್ಟಿಯ ಸ್ವಯಂಸೇವಕನಾದೆ ಮತ್ತು ಒರ್ವ ಹೊಸ ವಾಸ್ತುಶಿಲ್ಪಿಯಾಗಿ ಏನು ಕೊಡುಗೆ ನೀಡಬಹುದಿತ್ತೊ ಅದನ್ನು ನೀಡಿದೆ. 2014 ಬಂತು, ವಾರಾಣಾಸಿನಲ್ಲಿ ಕೇಜ್ರಿವಾಲ್ ಮೋದಿಯನ್ನು ಸೋಲಿಸುವುದನ್ನೆ ನಾನು ಎದುರುನೋಡುತ್ತಿದ್ದೆ. ನನ್ನ ಸ್ನೇಹಿತ ವೈದಾ ಕೌಶಲ್ (@ ವೈಭ್ವಕೌಶಲ್) ಯಾವಾಗಲೂ ಕೇಜ್ರಿವಾಲ್ ದೊಡ್ಡ ಕಿಲಾಡಿ ಎಂಬುದನ್ನು ನೆನಪಿಸುತ್ತಿದ್ದರೂ ನನ್ನೊಳಗಿನ ಕೆಂಪು ಬಂಡಾಯಗಾರ ಅದನ್ನು ಕೇಳಲು ಸಿದ್ಧನಿರಲಿಲ್ಲ ಮತ್ತು ಕೇಸರಿ ಪಾಳಯದ ಸೋಲು ನನ್ನ ಏಕೈಕ ಬಯಕೆಯಾಗಿತ್ತು.
ವಿಶ್ವವೇ ದೊಡ್ಡ ಪಿತೂರಿಗೆ ಒಳಗಾಗಿತ್ತು
ಏತನ್ಮಧ್ಯೆ, ನಾನು ಅಜಂತಾ, ಎಲ್ಲೋರಾ ಗುಹೆಗಳಿಗೆ ಅಧ್ಯಯನ ಪ್ರವಾಸ ಹೋಗಿದ್ದೆ. ಅಲ್ಲಿನ ಭವ್ಯವಾದ ವಾಸ್ತುಶಿಲ್ಪ ಮತ್ತು ಅತ್ಯದ್ಭುತ ಕೌಶಲ್ಯಗಳಿಂದ ನಿರ್ಮಿತವಾದ ಗುಹೆಗಳನ್ನು ಕಂಡು ಆಶ್ಚರ್ಯಚಕಿತನಾದೆ. ಆ ಅದ್ಭುತ ನನ್ನ ಮನಸ್ಸನ್ನು ಸೋರೆಗೊಂಡಿತು. ನಾನು ಗುಹೆಗಳ ಇತಿಹಾಸವನ್ನು ಓದಲು ಪ್ರಾರಂಭಿಸಿದೆ, ಅದರ ವಿವಿಧ ಆಯಾಮವನ್ನು ತಲುಪಲು ಪ್ರಯತ್ನಿಸಿದೆ. ಭಾರತದ ಜ್ಞಾನದ ಇತಿಹಾಸ, ಏಷ್ಯಾ ಸಮಾಜದ ನಕಲಿ ಕಥೆಗಳು, ಜೋನ್ಸ್ ಮತ್ತು ಮುಲ್ಲರ್ಸ್, ಇತ್ಯಾದಿ. ಒಟ್ಟಾರೆ ಪಶ್ಚಿಮದ ಪಿತೂರಿ ನನಗೆ ಸ್ಪಷ್ಟವಾಯಿತು. ಭಾರತವನ್ನು ವಿಭಜಿಸುವ ವಿದ್ಯಮಾನಗಳು ಮತ್ತು ಮಿಷನರಿಗಳ ಕುತಂತ್ರಗಳನ್ನು ಅರ್ಥಮಾಡಿಕೊಂಡೆ.
ಜಾಗತಿಕ ಮಟ್ಟದಲ್ಲಿ ಕಪೋಲಕಲ್ಪಿತ ಎಂದು ಪರಿಗಣಿಸಲ್ಪಟ್ಟ ಮ್ಯಾಕ್ಸ್ ಮುಲ್ಲರ್ನ ಆರ್ಯನ್ ಇನ್ವೇಷನ್ ಸಿದ್ಧಾಂತವನ್ನು ಭಾರತೀಯ ಎಡಪಂಥೀಯರು, ರೊಮಿಲಾ ಥಾಪರ್ನಂತಹವರ ಹಿತಾಸಕ್ತಿಗೆ ಅನುಗುಣವಾಗಿ ಸತ್ಯವೆಂದು ಪ್ರಚಾರ ಮಾಡಿದರು. ತನ್ನನ್ನು ತಾನು ಕ್ರಾಂತಿಕಾರಿ ಎನ್ನುವ ರಾಜಕೀಯ ಅಂಗವೊಂದು ಜಾಗತಿಕವಾಗಿ ತಿರಸ್ಕರಿಸಲ್ಪಟ್ಟ ಸಿದ್ಧಾಂತವನ್ನು ಯಾಕೆ ಸತ್ಯವೆಂದು ಪ್ರಚಾರ ಮಾಡಿತು ಎಂಬ ಪ್ರಶ್ನೆ ಕಾಡಿತು. ಆದರೆ, ಉತ್ತರ ತೀರಾ ಸ್ಪಷ್ಟವಾಗಿತ್ತು. ಮೇಲ್ಜಾತಿಯ ವಿರುದ್ಧ ದಲಿತರನ್ನು, ಉತ್ತರ ಭಾರತೀಯರ ವಿರುದ್ಧ ದಕ್ಷಿಣ ಭಾರತೀಯರನ್ನು ಎತ್ತಿಕಟ್ಟಿ ಆ ಮೂಲಕ ಭಾರತವನ್ನು ಹತ್ತಿಕ್ಕುವ ಉದ್ದೇಶ ಇದರ ಹಿಂದಿದೆ. ಆರ್ಯನ್ನರು ಹೊರಗಿನವರು ಎಂದು ಪ್ರಚಾರ ಮಾಡುವ ಮೂಲಕ ಬಲ ಆಡಳಿತಗಾರರನ್ನು ಹತ್ತಿಕ್ಕಿ ಅಧಿಕಾರ ಸ್ಥಾಪಿಸುವುದು ಎಡಪಂಥೀಯರ ಹಪಹಪಿಯಾಗಿತ್ತು. ಪ್ರಾಚೀನ ಭಾರತದ ನನ್ನ ಅಧ್ಯಯನಗಳು ಎಡಪಂಥೀಯರ ಬೂಟಾಟಿಕೆಗಳನ್ನು ಸಾಬೀತುಪಡಿಸಿವೆ. ಕ್ರಾಂತಿಕಾರಿಗಳಾದವರು ಎಂದಿಗೂ ಸುಳ್ಳಿನ ಪರ ಬ್ಯಾಟ್ ಬೀಸುವುದಿಲ್ಲ. ಆದರೆ ಈ ಎಡಪಂಥೀಯರ ಅಡಿಪಾಯವು ಸುಳ್ಳಿನ ಅಡಿಗಲ್ಲಿನ ಮೇಲೆ ನಿಂತ ಪರಾವಲಂಬಿ ಜೀವನದಂತೆ ಕಾಣುತ್ತದೆ.
ನಮೋವನ್ನು ಅಧಿಕಾರದಿಂದ ಹೊರಗಿಡಲು, ಮಣಿ ಶಂಕರ್ ಅಯ್ಯರ್ ನಂತಹವರು ಎಲ್ಓಸಿಯಲ್ಲಿ ಗುಂಡು ಹಾರಿಸುದರಲ್ಲಿ ನಿರತವಾಗಿದ್ದ ಪಾಕಿಸ್ಥಾನದ ಬಳಿ ಸಹಾಯಕ್ಕೆ ಮನವಿ ಮಾಡಿದಂತಹ ಘಟನೆಗಳು ಬಳಿಕ ಜರುಗಿತು. ಯಾಕೆ ಅತೀ ಭ್ರಷ್ಟಾಚಾರಿಗಳು ನಮ್ಮ ಪ್ರಧಾನಿಯನ್ನು ಅಧಿಕಾರದಿಂದ ಹೊರಗಿಡಲು ಶತ್ರುಗಳ ಬಳಿ ಸಹಾಯಾಚಿಸಿದರು ಎಂದು ಯೋಚಿಸಲು ಒಂದು ಪ್ರಚೋದಕ ಅಂಶ ಇಲ್ಲಿ ನನಗೆ ದೊರಕಿತು. ಇದಲ್ಲದೆ, ವಿವಾದಿತ ಅಯೋಧ್ಯಾದ ವಿವರ ನನಗೆ ಸ್ಪಷ್ಟವಾಯಿತು. ನಾನು ರಾಮ ಜನ್ಮಭೂಮಿ ದೇವಸ್ಥಾನದ ಮೌಲ್ಯವನ್ನು ಮತ್ತು ಬಾಬ್ರಿಗಾಗಿ ಬ್ಯಾಟಿಂಗ್ ಮಾಡುವವರ ತಪ್ಪು ಗ್ರಹಿಕೆಯನ್ನು ಅರಿತುಕೊಂಡೆ. ಸುಳ್ಳು ಪ್ರಚಾರಕರ ಜೊತೆ ನಡೆಯುವುದು ನನ್ನಂತಹ ಕ್ರಾಂತಿಕಾರಕರಿಗೆ ದೊಡ್ಡ ಪಾಪವಾಗಿದೆ. ಅಂಬೇಡ್ಕರ್ ಅವರಿಗೆ ಐಎನ್ಸಿ ಮತ್ತು ಎಡಪಂಥೀಯರ ಜೊತೆ ಇದ್ದ ಸಂಕೀರ್ಣ ಸಂಬಂಧಗಳು, ನನ್ನ ಎಡ ಮತ್ತು ಕೇಂದ್ರಿತ ಮೃದು ಧೋರಣೆಯನ್ನು, ಆಕರ್ಷಣೆಯನ್ನು ಮತ್ತಷ್ಟು ದುರ್ಬಲಗೊಳಿಸಿತು. ಐಎನ್ಸಿ, ಎಡಪಂಥೀಯರಲ್ಲಿ ಯಾರೂ ಅಂಬೇಡ್ಕರ್ ಅವರ ಆಲೋಚನೆಗಳನ್ನು ಹೊಂದಿರಲಿಲ್ಲ. ಅಂಬೇಡ್ಕರ್ ವಿರೋಧಿಯಾಗಿದ್ದವರನ್ನು ಬೆಂಬಲಿಸುವುದು ಭಾರತದ ಸಂವಿಧಾನವನ್ನು ಅಗೌರವ ಮಾಡಿದಂತೆ. ಅಂಬೇಡ್ಕರ್ ಅವರು ಮಂಡಲ್ ಆಯೋಗದ ಪೂರ್ವದಲ್ಲಿ ಮಾತ್ರ ಎಡಪಂಥೀಯ ಮುಖವಾಗಿದ್ದರು. ಭಾರತೀಯ ಎಡ ಮತ್ತು ಕೇಂದ್ರಿತರ ಇತಿಹಾಸವು, ಅವರು ರಾಜಕೀಯ ಅಥವಾ ಅಧಿಕಾರದ ಲಾಭಕ್ಕಾಗಿ ಯಾರನ್ನು ಬೇಕಾದರೂ ಬಳಸಿಕೊಳ್ಳುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದೆ. 2002 ರ ಗುಜರಾತ್ ದಂಗೆಯಲ್ಲಿ ನರೇಂದ್ರ ಮೋದಿ ತಪ್ಪಿತಸ್ಥರಲ್ಲ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಹೀಗಾಗಿ ಅವರನ್ನು ಈ ವಿಷಯದಲ್ಲಿ ಪ್ರಶ್ನಿಸುವುದು ನ್ಯಾಯಾಲಯದ ಉಲ್ಲಂಘನೆಯಾಗುತ್ತದೆ. ನ್ಯಾಯಾಲಯ ಮತ್ತು ಸಂವಿಧಾನದ ಮಾತುಗಳನ್ನು ಒಪ್ಪಿಕೊಳ್ಳದಿರುವುದು ನನಗೆ ಪಾಪವಾಗಿದೆ. ಪುರಾತತ್ವ ಇಲಾಖೆ ಪತ್ತೆಹಚ್ಚಿದ ಸತ್ಯಗಳಿಂದಾಗಿ ನನಗೆ, ರಾಮ ಮಂದಿರದ ಬಗ್ಗೆ ಬಿಜೆಪಿ ನಿಲುವು ಕ್ರಾಂತಿಕಾರಕ ಮತ್ತು ತರ್ಕಬದ್ಧ ಎನಿಸುತ್ತದೆ. ನಾನು ಈ ನಿಲುವುಗಳಿಗಾಗಿ ಬಲಪಂಥೀಯ ಎನಿಸಲು ಸಿದ್ಧನಿದ್ದೇನೆ. ಮೂರ್ಖ ಎಡಪಂಥೀಯ ಎನಿಸುವ ಬದಲು, ಕ್ರಾಂತಿಕಾರಿ ಬಲಪಂಥೀಯನಾಗುವುದು ಒಳ್ಳೆಯದು. ( ಪುರಾತತ್ವ ಇಲಾಖೆಯ ಕೆ.ಮುಹಮ್ಮದ್ ಅವರು ಬರೆದ ಲೇಖನ ಇದಕ್ಕೆ ಸಾಕಷ್ಟು ಪುರಾವೆ ಒದಗಿಸುತ್ತದೆ).
ಬಿಜೆಪಿಯ ನಿಲುವು ಮತ್ತು ಚಿತ್ರಣ ಸ್ಪಷ್ಟವಾಗಿದ್ದು, ನನಗೆ ಸೂಕ್ತವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಅಧಿಕಾರವನ್ನು ನೀಡಿತು, ಆಪರೇಷನ್ ವಿಜಯ್ ಅಥವಾ ನ್ಯೂಕ್ಲಿಯರ್ ಸಶಕ್ತೀಕರಣವನ್ನು ನೀಡಿತು. ಆದರೆ ಕಾಂಗ್ರೆಸ್ ನಮಗೆ ದೋಷಪೂರಿತ ಆರ್ಥಿಕ ನೀತಿ, ತುರ್ತು ಪರಿಸ್ಥಿತಿ ಮತ್ತು ಭ್ರಷ್ಟಾಚಾರವನ್ನು ನೀಡಿದೆ. ಅಣ್ಣಾ ಹಜಾರೆಯವರ ಜೊತೆಗೂಡಿ ಪ್ರತಿಭಟನೆ ನಡೆಸಿದ್ದ ಕೇಜ್ರಿವಾಲ್ ಅವರು, ಬಳಿಕ ಕಾಂಗ್ರೆಸ್ ಜೊತೆಗೂಡಿ ಸರಕಾರವನ್ನು ರೂಪಿಸಿ ತನ್ನ ಅಧಿಕಾರ ಕೇಂದ್ರಿತ ಅಜೆಂಡಾವನ್ನು ಈಗಾಗಲೇ ಪ್ರದರ್ಶಿಸಿದ್ದಾರೆ. ಭಾರತೀಯ ರಾಜಕೀಯಕ್ಕೆ ಗಂಭೀರ ನಾಯಕನ ಅಗತ್ಯವಿದೆಯೇ ಹೊರತು ಜೋಕರ್ನ ಅಗತ್ಯವಲ್ಲ ಎಂಬುದು ನನಗೆ 2014ರ ಮಧ್ಯದ ವೇಳೆಗೆ ಅರ್ಥವಾಯಿತು.
ನಮೋ ವರ್ಷಗಳು
55 ತಿಂಗಳಗಳ ನಮೋ ಆಡಳಿತ ಪ್ರತಿ ಸಾಮಾನ್ಯ ಮನುಷ್ಯನ ಜೀವನವನ್ನು ಬಲಪಡಿಸುವ ಸಲುವಾಗಿ ವ್ಯಾಪಕವಾಗಿ ಕೆಲಸ ಮಾಡಿದೆ. ಕೇವಲ ಅಜ್ಞಾನಿ ನಮೋನ ಸಮರ್ಪಣೆ ಮತ್ತು ಫಲಿತಾಂಶಗಳನ್ನು ಪ್ರಶ್ನಿಸಬಲ್ಲ. ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಪಾಕಿಸ್ತಾನದ PM ನವಾಜ್ ಶರೀಫ್ ಸೇರಿದಂತೆ ಎಲ್ಲ ಸಾರ್ಕ್ ಮುಖಂಡರು ಭಾಗವಹಿಸಿದ್ದರು. ಷರೀಫ್ ಅವರ ಮಗಳ ಮದುವೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭೇಟಿ ನೀಡಿ, ಉಭಯ ರಾಷ್ಟ್ರಗಳ ಮಾತುಕತೆಗೆ ಮುಕ್ತತೆಯನ್ನು ನೀಡಿದರು. ಆದರೆ ಬಳಿಕವೂ ಪಾಕಿಸ್ತಾನ ಭಾರತದೊಂದಿಗೆ ಪ್ರಾಕ್ಸಿ ಯುದ್ಧವನ್ನು ನಿಲ್ಲಿಸಲಿಲ್ಲವಾದ್ದರಿಂದ ಸಾರ್ಕ್ 2016ರ ಶೃಂಗಸಭೆ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಭಾರತ ಪಾಕ್ನ್ನು ಜಾಗತಿಕ ಬಹಿಷ್ಕಾರಕ್ಕೆ ಕಾರಣವಾಗುವಂತೆ ಮಾಡಿತು. ಪಾಕಿಸ್ತಾನದ ರಾಜತಾಂತ್ರಿಕ ಬಹಿಷ್ಕಾರ ಎನ್ಡಿಎ ಸರಕಾರ ಮತ್ತು ಮೋದಿ ಅವರ ಉತ್ತಮ ಸಾಧನೆಯೇ ಸರಿ.
ಉರಿ ದಾಳಿಯು ಸರ್ಕಾರವನ್ನು ಸರ್ಜಿಕಲ್ ಸ್ಟ್ರೈಕ್ಗೆ ಮುಂದಾಗುವಂತೆ ಮಾಡಿತು ಮತ್ತು ನಮ್ಮ ವೀರ ಸೈನ್ಯವು ಭಯೋತ್ಪಾದಕರ ಶಿಬಿರಗಳ ಮೇಲೆ ಸೆಪ್ಟೆಂಬರ್ 29,2016 ರಂದು ದಾಳಿ ನಡೆಸಿ ಧ್ವಂಸ ಮಾಡಿತು, ಈ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿತು. ಇಡೀ ವಿಶ್ವವು ಸೇನೆಯ ಶೌರ್ಯ ಮತ್ತು ಮೋದಿ ಸರಕಾರದ ಹೆಜ್ಜೆಯನ್ನು ಶ್ಲಾಘಿಸಿತು. ಆದರೆ ಇಬ್ಬರು ವಿಮರ್ಶಕರು ಮಾತ್ರ ಇದಕ್ಕಾಗಿ ಕಣ್ಣೀರಿಟ್ಟರು, ಅವರೆಂದರೆ ಒಂದು ಪಾಕಿಸ್ತಾನ ಮತ್ತೊಂದು ಭಾರತದ ಪ್ರತಿಪಕ್ಷ. ಅವರು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈ ಘಟನೆ ನಮೋ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರು ಸೌದಿ ಅರೇಬಿಯವನ್ನು ಕಚ್ಚಾ ತೈಲದ ಮೇಲೆ ‘ಆನ್-ಟೈಮ್ ಡೆಲಿವರಿ ಪ್ರೀಮಿಯಂ ಶುಲ್ಕಗಳು’ ವಿಧಿಸಬಾರದೆಂದು ಒಪ್ಪಂದ ಮಾಡಿಕೊಂಡರು. ಇದು ದೇಶದ ಸಾವಿರಾರು ಕೋಟಿಗಳನ್ನು ಉಳಿಸಿದೆ. ಭಾರತವು 3 ಇಂಧನ ಜಲವಿದ್ಯುತ್ ಸ್ಥಾವರಗಳನ್ನು ಮತ್ತು ಭೂತಾನ್ನಲ್ಲಿ ಸುಮಾರು 1416 ಮೆವ್ಯಾಟ್ ಅಣೆಕಟ್ಟುಗಳನ್ನು ನಿರ್ಮಿಸಿದೆ. ಇದರ 3/4 ನೇ ಶಕ್ತಿಯು ಭಾರತಕ್ಕೆ ರಫ್ತಾಗುತ್ತದೆ. 2016 ರಲ್ಲಿ ದ್ವಿಪಕ್ಷೀಯ ವಹಿವಾಟು 8,723 ಕೋಟಿ ರೂ.ಗಳಾಗಿದ್ದು, ಆಮದು 5,528.5 ಕೋಟಿ ರೂ. (ಭೂತಾನ್ ಒಟ್ಟು ಆಮದುಗಳಲ್ಲಿ ಶೇ. 82 ರಷ್ಟು) ಮತ್ತು ರಫ್ತು ದರಗಳು 3,205.2 ಕೋಟಿ ರೂ. (ವಿದ್ಯುತ್ ಕ್ಷೇತ್ರದಲ್ಲಿ 90% ರಷ್ಟು ಭೂತಾನ್ ರಫ್ತು). ನೇಪಾಳದಲ್ಲಿ ಅತಿದೊಡ್ಡ ಅಣೆಕಟ್ಟನ್ನು ನಿರ್ಮಿಸುವ ಅಂತರಾಷ್ಟ್ರೀಯ ಯೋಜನೆಯನ್ನು ಭಾರತವು ಪಡೆಯುವುದರಲ್ಲಿ ಯಶಸ್ವಿಯಾಯಿತು, ಇದರಿಂದ ಭಾರತವು 83% ಗ್ರೀನ್ ಇಂಧನವನ್ನು ದೊಡ್ಡ ಜಲವಿದ್ಯುತ್ ಸ್ಥಾವರದಿಂದ ಉಚಿತವಾಗಿ ಉತ್ಪಾದಿಸುತ್ತದೆ. ಚೀನಾ ಯೋಜನೆಯನ್ನು ಪಡೆಯಲು ಕಷ್ಟಪಟ್ಟು ಪ್ರಯತ್ನಿಸಿದೆ ಆದರೆ ಪ್ರಯೋಜನವಾಗಿಲ್ಲ. ದೆಹಲಿಯ ಮುಂಬೈ ಹೂಡಿಕೆ ಕಾರಿಡಾರ್ (ಡಿಎಂಐಸಿ) ನಲ್ಲಿ 30 ಶತಕೋಟಿ ಡಾಲರ್ ಹೂಡಿಕೆ ಮಾಡಲು ಜಪಾನನ್ನು ಮನವೊಲಿಸುವಲ್ಲಿ ಮೋದಿ ಯಶಸ್ವಿಯಾದರು.
ಕಾರ್ಯತಂತ್ರದ ಪಾಲುದಾರಿಕೆಗಳು
ಮೋದಿ ಸರಕಾರ ವಿಯೆಟ್ನಾಂನೊಂದಿಗೆ ಆಯಕಟ್ಟಿನ ಸಂಬಂಧವನ್ನು ಅಭಿವೃದ್ಧಿಪಡಿಸಿದೆ. ಯುಎಸ್ ನಿಷೇಧದ ಹೊರತಾಗಿಯೂ ಇರಾನ್ ನಿಂದ ತೈಲ ಆಮದುಗಳನ್ನು ಮೋದಿ ಹೆಚ್ಚಿಸಿದ್ದಾರೆ ಮತ್ತು ಪಾಕಿಸ್ತಾನವನ್ನು ಸುತ್ತುವರೆದಿರುವ ಇರಾನ್ನಲ್ಲಿ ’ಚಬಹಾರ್ ಬಂದರು’ ನಿರ್ಮಿಸಿದ್ದಾರೆ. ಈ ಬಂದರಿನಲ್ಲಿ ನಮ್ಮ ನೌಕಾ ಹಡಗುಗಳು ವಿಶೇಷ ಪ್ರವೇಶವನ್ನು ಹೊಂದಿರುತ್ತದೆ. ಇದರೊಂದಿಗೆ, ಭಾರತವು ಪಾಕ್ನ ಚಲನೆಗಳನ್ನು ಪರಿಶೀಲಿಸಬಹುದು. ಆಸ್ಟ್ರೇಲಿಯಾದಿಂದ ಇಂಧನ ಉತ್ಪಾದನೆಗಾಗಿ ಯುರೇನಿಯಂನ ಹೆಚ್ಚುವರಿ ಪೂರೈಕೆಗಳನ್ನು ಭಾರತ ಪಡೆಯಬಹುದು.
’ಹ್ಯಾಂಬಂಟೋಟಾ ಬಂದರು’ ಅಭಿವೃದ್ಧಿ ಬಗೆಗಿನ ಚೀನಾದ ಒಪ್ಪಂದದಿಂದ ಶ್ರೀಲಂಕಾವನ್ನು ಹಿಂದೆ ಸರಿಯುವಂತೆ ಮಾಡಿದ್ದು ಮೋದಿ ಸರ್ಕಾರದ ಪ್ರಮುಖ ಸಾಧನೆಯಾಗಿದೆ. ಯುಪಿಎ ಆಡಳಿತದಲ್ಲಿ ಚೀನಾ ಒಪ್ಪಂದವನ್ನು ಪಡೆಯಬಹುದೇನೋ. ಇತ್ತೀಚಿನ ಸಿಐಎ ವರದಿಯು ಶ್ರೀಲಂಕಾದ ಚುನಾವಣೆಯಲ್ಲಿ ಅಧ್ಯಕ್ಷ ರಾಜಪಕ್ಷೆಯನ್ನು ಸ್ಥಳಾಂತರಿಸುವಲ್ಲಿ RAW ವಹಿಸಿದ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದೆ.
ಭಾರತದಲ್ಲಿ 20 ಶತಕೋಟಿ ಡಾಲರ್ ಹೂಡಿಕೆ ಮೋದಿ ಸರ್ಕಾರ ಚೀನಾವನ್ನು ಉತ್ತೇಜಿಸಿದೆ ಚೀನಾದೊಂದಿಗಿನ ವ್ಯಾಪಾರ ಕೊರತೆಯನ್ನು ತಗ್ಗಿಸಲು ಇದರಿಂದ ಸಾಧ್ಯವಾಯಿತು.
ಯುಎಸ್, ಇಸ್ರೇಲ್ ಮತ್ತು ಜಪಾನ್ ನೊಂದಿಗೆ ಸಂಬಂಧ ಬೆಳೆಸಿ ದೇಶದ ಭದ್ರತೆಗೆ ಮೋದಿ ಉನ್ನತ ಆದ್ಯತೆ ನೀಡಿದ್ದಾರೆ. ಪಾಕಿಸ್ತಾನವನ್ನು ಪರೀಕ್ಷಿಸಲು ಮಲಬಾರ್ ಸಮರಾಭ್ಯಾಸಕ್ಕೆ ಇವರನ್ನು ಆಹ್ವಾನಿಸಲಾಯಿತು. ಇಸ್ರೇಲ್ನಿಂದ ಉನ್ನತ-ಮಟ್ಟದ ಮಿಲಿಟರಿ ಡ್ರೋನ್ಸ್ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಳ್ಳುವಲ್ಲಿ ಮೋದಿ ಯಶಸ್ವಿಯಾದರು
ಸ್ವಚ ಭಾರತ್ ಮಿಷನ್ (ಎಸ್ಬಿಎಂ)
ಜನರ ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಎಲ್ಲಾ ಮನೆಗಳಲ್ಲಿ ಶೌಚಾಲಯಗಳ ಬಳಕೆಯನ್ನು ಕಡ್ಡಾಯಗೊಳಿಸುವುದುವುದು ಸ್ವಚ ಭಾರತ್ ಮಿಷನ್ ನ ಮುಖ್ಯ ಕಾರ್ಯಕ್ರಮವಾಗಿದ್ದು, ಇದರಿಂದಾಗಿ, ಬಯಲು ಬಹಿರ್ದೆಸೆ ಕೊನೆಯಾಗುತ್ತಾ ಬಂದಿದೆ. ಅಕ್ಟೋಬರ್ 2014 ರಂದು ಈ ಅಭಿಯಾನ ಪ್ರಾರಂಭವಾದ ಬಳಿಕ ದೇಶದಲ್ಲಿ 75 ದಶಲಕ್ಷ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆ ವೇಳೆಯಲ್ಲಿ ಶೇ.40% ಕ್ಕಿಂತಲೂ ಕಡಿಮೆ ಮನೆಗಳು ಶೌಚಾಲಯಗಳನ್ನು ಹೊಂದಿದ್ದವು. ಇಂದು ಅದು ಸುಮಾರು 85% ರಷ್ಟಾಗಿದೆ.
ಬಯಲು ಮಲವಿಸರ್ಜನೆ-ಮುಕ್ತ ಹಳ್ಳಿಗಳ ಸಂಖ್ಯೆಯು ಇಂದು 47,000 ರಿಂದ 384,000 ಕ್ಕೆ ಏರಿದೆ ಮತ್ತು ಇದೇ ಅವಧಿಯಲ್ಲಿ ದೇಶದಲ್ಲಿ 65% ರಷ್ಟು ಹಳ್ಳಿಗಳು ODF ಆಗಿ ಘೋಷಿಸಲ್ಪಟ್ಟಿವೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಯಲು ಶೌಚಮುಕ್ತಗೊಂಡಿವೆ. ಇದು ನಮೋ ಸರ್ಕಾರದ ಒಂದು ದೊಡ್ಡ ಸಾಧನೆ ಎಂದು ನಾನು ನೋಡುತ್ತೇನೆ ಮತ್ತು ಅವರನ್ನು 2019 ರಲ್ಲಿ ಮರಳಿ ಅಧಿಕಾರಕ್ಕೆ ಏರಿಸಲು ಇದು ಕೂಡ ಒಂದು ಬಲವಾದ ಕಾರಣವಾಗಿದೆ.
ಡಿಜಿಟಲ್ ಇಂಡಿಯಾ
ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗ 27 ರಾಜ್ಯಗಳಲ್ಲಿ 86 ಬಿಪಿಓಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಬಿಪಿಓಗಳ ವೈಯಕ್ತಿಕ ಸಾಮರ್ಥ್ಯ 53,300 ಸೀಟುಗಳು, 12,500 ಮಂದಿ ಸಣ್ಣ ನಗರಗಳ ಜನರು ಇಲ್ಲಿ ನಿಯೋಜಿತಗೊಂಡಿದ್ದಾರೆ. ಮಾರ್ಕೆಟ್ಪ್ಲೇಸ್ ಪೋರ್ಟಲ್ಗಳನ್ನೂ ಆರಂಭಿಸಲಾಗಿದೆ.ಎರಡು ಮೊಬೈಲ್ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಡಿಜಿಟಲ್ ಪೇಮೆಂಟ್ಗಳ ಪ್ರಮಾಣ ಶೇ.81.90ರಷ್ಟು ಏರಿಕೆಯಾಗಿದೆ. 1.15 ಲಕ್ಷ ಗ್ರಾಮಪಂಚಾಯತ್ಗಳು ಭಾರತ್ ನೆಟ್ ವ್ಯಾಪ್ತಿಗೆ ಬಂದಿವೆ.
ಸ್ಟಾರ್ಟ್ ಅಪ್ ಇಂಡಿಯಾ
ಉದ್ಯಮಶೀಲತೆಯನ್ನು ಉತ್ತೇಜಿಸಲು ತಂದ ಅತ್ಯುತ್ತಮ ಯೋಜನೆ ಇದಾಗಿದೆ. ಮುದ್ರಾ ಸಾಲ ಯೋಜನೆ ಕೂಡ ಸಣ್ಣ ಉದ್ಯಮಗಳ ಉಗಮಕ್ಕೆ ಕೈಗೊಂಡ ಉತ್ತಮ ಕಾರ್ಯಕ್ರಮ
ಮೋದಿಯ ಬ್ಯಾಂಕಿಂಗ್ ವಂಚನೆ ತಡೆಗಟ್ಟುವ ಯೋಜನೆ, ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಯೋಜನೆ ಜನ ಸಾಮಾನ್ಯನಿಗೆ ಪ್ರಯೋಜನ ತಂದಿದೆ.
ಮನ್ ಕೀ ಬಾತ್ ಸಾಮಾನ್ಯರನ್ನು ತಲುಪುವಲ್ಲಿನ ಉತ್ತಮ ಕಾರ್ಯಕ್ರಮ, ಗಿನ್ನಿಸ್ ದಾಖಲೆ ಹೊಂದಿರುವ ಜನ್ಧನ್, ಎಲ್ಪಿಜಿ ಸಬ್ಸಿಡಿಯಲ್ಲಿನ ಸುಧಾರಣೆ, ಜಿಎಸ್ಟಿ, ಉಜ್ವಲ ಯೋಜನೆ, ಒನ್ ಬ್ಯಾಂಕ್ ಒನ್ ಪೆನ್ಶನ್ಗಳು ಮಹತ್ವದ ಯೋಜನೆಗಳಾಗಿವೆ.
ಇದನ್ನು ಹೊರತುಪಡಿಸಿ ಜನ್ ಔಷಧಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕಿಸಾನ್ ವಿಕಾಸ್ ಪಾತ್ರ, ಸುಕನ್ಯ ಸಮೃದ್ಧಿ ಯೋಜನೆ ಮಹತ್ವದ ಮೈಲಿಗಲ್ಲು ಸಾಧಿಸುವ ಯೋಜನೆಗಳಾಗಿವೆ.
ಮೋದಿ ಸರ್ಕಾರದ ಇಂತಹ ನೂರಾರು ಕ್ರಮಗಳು 2019ರಲ್ಲಿ ಬಿಜೆಪಿಗೆ ಮತ ಹಾಕುವಂತೆ ನನ್ನನ್ನು ಪ್ರೇರೇಪಿಸುತ್ತಿದೆ. ಹಲವು ದಶಕಗಳಿಂದ ಹಿಂದಿನ ಸರ್ಕಾರಗಳು ನಮ್ಮ ಕಲ್ಪನೆಯಲ್ಲೂ ನೀಡದ ವಿಷಯಗಳನ್ನು ಮೋದಿ ಸರ್ಕಾರ ನೀಡಿದೆ. ಅವರು ಒಂದು ವೇದಿಕೆಯನ್ನು ಸೃಷ್ಟಿಸಿದ್ದಾರೆ. ಒಂದು ವೇಳೆ 2019ರಲ್ಲಿ ಅವರನ್ನು ಮತ್ತೆ ಅಧಿಕಾರಕ್ಕೆ ನಾವು ತಾರದೇ ಹೋದರೆ, ಅದು ಭಾರತದ ಪಾಲಿಗೆ ಅತೀ ಕೆಟ್ಟ ದುರಾದೃಷ್ಟವಾಗಬಹುದು.
ಮೂಲ ಲೇಖನ: ಆಭಾಸ್ ಮಾಲ್ದಹಿಯರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.