ನವದೆಹಲಿ: ಹರ್ಯಾಣದ ಐದು ನಗರಗಳಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಹಿನ್ನಲೆಯಲ್ಲಿ ಈ ಗೆಲುವು ಬಿಜೆಪಿಗೆ ಮಹತ್ವದ್ದಾಗಿದೆ.
ಹಿಸ್ಸಾರ್, ಕರ್ನಲ್, ಪಾಣಿಪತ್, ರೋಹ್ಟಕ್, ಯಮುನಾನಗರ್ಗಳಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದಾರೆ, ಮೇಯರ್ ಚುನಾವಣೆ ಮಾತ್ರವಲ್ಲದೇ, ಕರ್ನಲ್, ಪಾಣಿಪತ್, ಯಮುನನಗರ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯನ್ನೂ ಬಿಜೆಪಿ ಗೆದ್ದಿದೆ.
ತನ್ನ ಸರ್ಕಾರದ ನಿಯಮಗಳಿಂದಾಗಿ ಈ ಗೆಲುವು ಸಾಧ್ಯವಾಗಿದೆ. ಜನಸೇವೆ ನಮ್ಮ ಆದ್ಯತೆಯಾಗಿದ್ದು, ಭವಿಷ್ಯದಲ್ಲೂ ನಮ್ಮ ಆದ್ಯತೆ ಮುಂದುವರೆಯಲಿದೆ ಎಂದು ಸಿಎಂ ಮನೋಹರ್ ಖಟ್ಟರ್ ಅವರು ವಿಶ್ಲೇಷಿಸಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.