ನವದೆಹಲಿ: ಪರಸ್ಪರ ಸಮ್ಮತಿಯ ಮೇರೆಗೆಯೇ ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಲ್ಲದೇ ರಾಮ ಮಂದಿರ ವಿಷಯ ಧಾರ್ಮಿಕ ಅಥವಾ ಕೋಮುವಾದದ ವಿಷಯವಲ್ಲ, ಅದು ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಪಟ್ಟದ್ದಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಆಜ್ ತಕ್ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಅವರು, ಅಯೋಧ್ಯಾ ಕೋಮುವಾದದ ವಿಷಯವಲ್ಲ, ಧಾರ್ಮಿಕ ವಿಷಯವೂ ಅಲ್ಲ. ಶ್ರೀರಾಮ ನಮ್ಮ ಇತಿಹಾಸದ, ಸಂಸ್ಕೃತಿಯ ಮತ್ತು ಪರಂಪರೆಯ ಸಂಕೇತ. ಅಯೋಧ್ಯದಲ್ಲಿ ರಾಮಮಂದಿರವಿತ್ತು ಎಂಬುದು ಸಾಬೀತಾಗಿದೆ. ಹಿಂದೂಸ್ಥಾನದ ಜನ್ಮಸ್ಥಳದಲ್ಲಿ ರಾಮನ ಮಂದಿರ ನಿರ್ಮಾಣವಾಗದೇ ಹೋದರೆ ಮತ್ತೆಲ್ಲಿ ಅದು ನಿರ್ಮಾಣವಾಗಲು ಸಾಧ್ಯ? ಅಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಕೋಟ್ಯಾಂತರ ಭಾರತೀಯರ ಭಾವನೆ ಮತ್ತು ಆಶಯವಾಗಿದೆ ಎಂದಿದ್ದಾರೆ.
ಜನರ ಭಾವನೆ ಹಿಂದೆ ಕೂಡ ಬಿಜೆಪಿಯ ಪ್ರಮುಖ ಅಜೆಂಡಾವಾಗಿತ್ತು, ಈಗಲೂ ಆ ಅಜೆಂಡಾಗೆ ಪ್ರಾಮುಖ್ಯತೆ ಇದೆ. ನ್ಯಾಯಾಲಯದಲ್ಲಿ ವಿಷಯ ಇರುವುದರಿಂದ ಕೆಲವೊಂದು ವಿಧಾನಗಳನ್ನು ಅನುಸರಿಬೇಕಾಗುತ್ತದೆ. ಪರಸ್ಪರ ಸಮ್ಮತಿಯ ಮೇರೆಗೆಯೇ ಮಂದಿರ ನಿರ್ಮಾಣವಾಗಬೇಕು, ಸಂಸತ್ತಿನಲ್ಲೂ ಮೂರನೇ ಎರಡರಷ್ಟು ಸಮ್ಮತಿ ಸಿಗಬೇಕು. ನಮ್ಮ ಧ್ಯೇಯ ಸರ್ವಧರ್ಮ ಸಮಭಾವ, ಅದರ ತತ್ವದಲ್ಲೇ ಮಂದಿರ ನಿರ್ಮಾಣವಾಗಬೇಕು ಎಂದಿದ್ದಾರೆ.
ಬಹುತೇಕ ಮುಸಲ್ಮಾನರು ಮಂದಿರ ನಿರ್ಮಾಣದ ಪರವಾಗಿ ಇದ್ದಾರೆ ಎಂಬುದನ್ನು ತಿಳಿಸಿದ ಅವರು, ರಾಜಕೀಯವಾಗಿ ವಿಷಯ ಬಗೆಹರಿಯದ ಕಾರಣ ಪ್ರಕರಣ ಇಂದು ನ್ಯಾಯಾಲಯದಲ್ಲಿ ಇದೆ ಎಂದರು.
source: timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.