ನವದೆಹಲಿ: ಇತ್ತೀಗಷ್ಟೇ ಕ್ರಿಕೆಟ್ ಬದುಕಿಗೆ ವಿದಾಯವನ್ನು ಹೇಳಿರುವ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು, ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಮೋದಿ ತನಗೆ ಬರೆದಿರುವ ಪತ್ರವನ್ನು ಗಂಭೀರ್ ಟ್ವಿಟರ್ ಮೂಲಕ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಕ್ರೀಡೆಗೆ ಅಮೋಘ ಕೊಡುಗೆ ನೀಡಿರುವ ಗಂಭೀರ್, ಸಾಮಾನ್ಯರ ಬದುಕಿನಲ್ಲಿ ಸಕಾರತ್ಮಕ ಬದಲಾವಣೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಮೋದಿ ಕ್ರಿಕೆಟಿಗನ ಸಾಧನೆಯನ್ನು ಬಣ್ಣಿಸಿದ್ದಾರೆ.
2007ರ ಐಸಿಸಿ ವರ್ಲ್ಡ್ ಟ್ವೆಂಟಿ20 ಮತ್ತು 2011ರ ಐಸಿಸಿ ವರ್ಲ್ಡ್ಕಪ್ನಲ್ಲಿ ಗಂಭೀರ್ ಸಾಧನೆಯನ್ನು ವಿಶೇಷವಾಗಿ ಉಲ್ಲೇಖ ಮಾಡಿರುವ ಅವರು, ಭಾರತ ನಿಮ್ಮ ಅಮೋಘ ಸಾಧನೆಯನ್ನು ಸದಾ ಸ್ಮರಿಸುತ್ತದೆ ಎಂದಿದ್ದಾರೆ.
‘ಭಾರತದ ಕ್ರೀಡೆಗೆ ನೀವು ನೀಡಿದ ಕೊಡುಗೆಗಳಿಗೆ ಅಭಿನಂದಿಸುತ್ತೇನೆ. ನಿಮ್ಮ ಅವಿಸ್ಮರಣೀಯ ಆಟಕ್ಕೆ ಭಾರತ ಚಿರಋಣಿಯಾಗಿರುತ್ತದೆ. ನಿಮ್ಮ ಪ್ರದರ್ಶನದ ಹಲವು ಭಾಗಗಳು ಭಾರತಕ್ಕೆ ಐತಿಹಾಸಿಕ ಫಲಿತಾಂಶವನ್ನು ನೀಡಿವೆ. ಏಳು ಬೀಳುಗಳ ನಡುವೆಯೂ ಶ್ರದ್ಧೆಯಿಂದ ದೇಶಕ್ಕಾಗಿ ಆಡಿದ್ದೀರಿ. ಕಡಿಮೆ ಅವಧಿಯಲ್ಲೇ ಅದ್ಭುತ ಓಪನರ್ ಆಗಿ ಮಿಂಚಿದ್ದೀರಿ’ ಎಂದಿದ್ದಾರೆ.
ಮೋದಿ ಶ್ಲಾಘನೆಗೆ ಅಭಿನಂದನೆ ತಿಳಿಸಿರುವ ಗಂಭೀರ್, ಭಾರತೀಯರ ಬೆಂಬಲ, ಪ್ರೀತಿ ಇರದಿರುತ್ತಿದ್ದರೆ ಇದೆಲ್ಲ ಸಾಧ್ಯವೇ ಆಗುತ್ತಿರಲಿಲ್ಲ. ಎಲ್ಲವನ್ನೂ ಭಾರತಕ್ಕೆ ಅರ್ಪಿಸುತ್ತೇನೆ ಎಂದಿದ್ದಾರೆ.
source: www.india.com
Thanks @narendramodi @PMOIndia for the kind words. Nothing of this would have been possible without love and support of our fellow countrymen. All these deeds are dedicated to our country. pic.twitter.com/3P3HcViIJ5
— Gautam Gambhir (@GautamGambhir) December 16, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.