ನವದೆಹಲಿ: 2008ರ ಮುಂಬೈ ದಾಳಿಯ ಹಿಂದೆ ಪಾಕಿಸ್ಥಾನ ಮೂಲದ, ಝಾಕಿ ಉರ್ ರೆಹಮಾನ್ ಲಖ್ವಿ ನೇತೃತ್ವದ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕೈವಾಡವಿತ್ತು ಎಂಬುದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ಒಪ್ಪಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮ ವಾಷಿಂಗ್ಟನ್ ಪೋಸ್ಟ್ ಮುಂದೆ, ಮುಂಬಯಿ ದಾಳಿ ಹಿಂದೆ ಪಾಕ್ ಭಯೋತ್ಪಾದಕ ಸಂಘಟನೆ ಇತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ದಾಳಿ ಭಯೋತ್ಪಾದನೆ ಕೃತ್ಯವಾಗಿದ್ದು, ಪ್ರಕರಣದ ಪ್ರಗತಿ ಯಾವ ಹಂತದಲ್ಲಿದೆ ಎಂಬುದನ್ನು ಶೀಘ್ರದಲ್ಲೇ ತಿಳಿದುಕೊಳ್ಳುವುದಾಗಿ ತಿಳಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಲಲ್ಲೆ ವೇಮೌತ್ ಅವರು ಸಂದರ್ಶನದ ವೇಳೆ ಖಾನ್ ಅವರಿಗೆ, ‘2008 ದಾಳಿಯ ರುವಾರಿಗಳನ್ನು ಶಿಕ್ಷಿಸಲು ಭಾರತ ಬಯಸುತ್ತಿದೆ, ದಾಳಿಯ ಮಾಸ್ಟರ್ಮೈಂಡ್ ಲಖ್ವಿಯನ್ನು ಪಾಕಿಸ್ಥಾನ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಪ್ರಕರಣದ ತನಿಖೆ ಯಾವುದೇ ಫಲ ನೀಡಿಲ್ಲ ಅಲ್ಲವೇ?’ ಎಂದು ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಖಾನ್, ‘ ನಾವು ಕೂಡ ಮುಂಬೈ ದಾಳಿಕೋರರನ್ನು ಶಿಕ್ಷಿಸಲು ಬಯಸಿದ್ದೇವೆ, ಪ್ರಕರಣದ ಪ್ರಗತಿಯ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದು ಭಯೋತ್ಪಾದನಾ ಕೃತ್ಯವಾದ್ದರಿಂದ ಪ್ರಕರಣವನ್ನು ಇತ್ಯರ್ಥ ಮಾಡುವುದು ನಮ್ಮ ಆಸಕ್ತಿಯೂ ಹೌದು’ ಎಂದಿದ್ದಾರೆ.
ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ ಮುಖ್ಯಸ್ಥ, ಬಿಪಿನ್ ರಾವತ್ ಅವರು, ‘ನಮಗೆ ದಾಳಿ ಯಾರು ನಡೆಸಿದ್ದಾರೆ ಎಂದು ಮೊದಲೇ ತಿಳಿದಿದೆ, ಅಂತಾರಾಷ್ಟ್ರೀಯ ಸಮುದಾಯಕ್ಕೂ ತಿಳಿದಿದೆ, ಇಂತಹ ಹೇಳಿಕೆಗಳ ಅಗತ್ಯ ನಮಗಿಲ್ಲ’ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.