ಮುಂಬಯಿ: ದೇಶದ ನಂ.1 ಶ್ರೀಮಂತ ಮುಕೇಶ್ ಅಂಬಾನಿಯವರ ಕುಟುಂಬ, ರಾಜಸ್ಥಾನದ ಉದಯ್ಪುರದಲ್ಲಿ 4 ದಿನಗಳ ಕಾಲ 5,100 ಜನರಿಗೆ ಅನ್ನಸೇವಾ ಕಾರ್ಯವನ್ನು ಆಯೋಜಿಸಿದೆ. ಅನ್ನಸೇವೆ ಪಡೆಯುವ ಬಹುತೇಕರು ವಿಶೇಷಚೇತನರು ಎಂಬುದು ವಿಶೇಷ.
ಅಂಬಾನಿಯವರ ಮಗಳು ಇಶಾ ಅಂಬಾನಿಯ ವಿವಾಹದ ಪ್ರಯುಕ್ತ ಈ ಅನ್ನಸೇವೆಯನ್ನು ಆಯೋಜನೆಗೊಳಿಸಲಾಗುತ್ತಿದೆ. ಡಿ.8ರಂದು ಉಧಯ್ಪುರದಲ್ಲಿ ವಿವಾಹ ಜರುಗುತ್ತಿದೆ.
ಉದಯ್ಪುರದ ನಾರಾಯಣ ಸೇವಾ ಸಂಸ್ಥಾನದಲ್ಲಿ ಡಿ.7ರಿಂದ ಡಿ.10ರವರೆಗೆ ಅನ್ನಸೇವೆ ನಡೆಯುತ್ತಿದ್ದು, ದಿನದ ಮೂರು ಹೊತ್ತೂ ಆಹಾರವನ್ನು ನೀಡಲಾಗುತ್ತದೆ.
ಅಷ್ಟೇ ಅಲ್ಲದೇ, ಮದುವೆ ಸಂಭ್ರಮಾಚರಣೆಯ ಪ್ರಯುಕ್ತ ಸ್ವದೇಶ್ ಬಜಾರ್ನ್ನು ತೆರೆಯಲಾಗಿದ್ದು, ದೇಶ ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಗಾಗಿ ಬಜಾರ್ನಲ್ಲಿ 108 ವಿವಿಧ ಭಾರತೀಯ ಕರಕುಶಲಗಳನ್ನು, ಕಲೆಗಳನ್ನು, ವಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.