ನವದೆಹಲಿ: ಜಲಿಯನ್ವಾಲಾ ಬಾಗ್ ನ್ಯಾಷನಲ್ ಮೆಮೋರಿಯಲ್ ಆಕ್ಟ್, 1951ಗೆ ತಿದ್ದುಪಡಿಯನ್ನು ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಮೆಮೋರಿಯಲ್ ಟ್ರಸ್ಟ್ನಲ್ಲಿ ಕಾಂಗ್ರೆಸ್ ಪಕ್ಷದ ಖಾಯಂ ಪ್ರತಿನಿಧಿತ್ವವನ್ನು ತೆಗೆದು ಹಾಕುವ ಸಲುವಾಗಿ ಈ ತಿದ್ದುಪಡಿಯನ್ನು ತರಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರು, ಒಂದು ಪಕ್ಷದ ಪರವಾಗಿರುವ ಏಕೈಕ ಕಾಯ್ದೆ ಇದಾಗಿದೆ. ಸಚಿವ ಸಂಪುಟ ಈ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಸಿದೆ ಎಂದಿದ್ದಾರೆ.
ತಿದ್ದುಪಡಿಯ ಬಳಿಕ, ಈ ಟ್ರಸ್ಟ್ ಸಂಸತ್ತಿನಲ್ಲಿನ ವಿರೋಧ ಪಕ್ಷದ ನಾಯಕನನ್ನು ಒಳಗೊಳ್ಳಲಿದೆ. ಒಂದು ವೇಳೆ ವಿರೋಧಪಕ್ಷ ಇಲ್ಲ ಎಂದಾದರೆ, ಏಕೈಕ ಅತೀದೊಡ್ಡ ಪಕ್ಷದ ನಾಯಕನನ್ನು ಒಳಗೊಳ್ಳಲಿದೆ.
ಟ್ರಸ್ಟ್ನ್ನು ರಾಜಕೀಯೇತರಗೊಳಿಸುವ ದೃಷ್ಟಿಯಿಂದ ಈ ತಿದ್ದುಪಡಿ ತರಲಾಗುತ್ತಿದೆ. ವಿರೋಧಪಕ್ಷದ ನಾಯಕನ ಹಾಜರಾತಿಯನ್ನು ಈ ತಿದ್ದುಪಡಿ ದೃಢಪಡಿಸುತ್ತದೆ ಎಂದಿದ್ದಾರೆ.
source: indianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.