ನವದೆಹಲಿ: ಇಂದು ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದಲ್ಲಿ ಆಚರಿಸಲಾಗುತ್ತಿದೆ. ಭಾರತೀಯ ಸೇನೆಯ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸುವ ಮತ್ತು ದೇಣಿಗೆಗಳನ್ನು ನೀಡಿದ ಕೃತಜ್ಞತೆಯನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಸೇನೆಯ ಉದಾತ್ತ ಪರಾಕ್ರಮ ಮತ್ತು ತ್ಯಾಗಗಳ ಗೌರವಾರ್ಥ ಶಸ್ತ್ರಾಸ್ತ್ರ ಪಡೆಗಳ ಧ್ವಜ ದಿನ ನಿಧಿಗೆ ಕೊಡುಗೆಗಳನ್ನು ನೀಡಿ ಕೃತಜ್ಞತೆಯನ್ನು ಸಲ್ಲಿಸುವಂತೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವೈಯಕ್ತಿಕ ರೂಪದಲ್ಲಿ ಯಾವುದೇ ವ್ಯಕ್ತಿಗಳು ತಮ್ಮಿಂದಾದ ಹಣಕಾಸು ನೆರವನ್ನು ಶಸ್ತ್ರಾಸ್ತ್ರ ಪಡೆಗಳಿಗೆ ನೀಡಬಹುದಾಗಿ, ಕೊಡುಗೆ ಹಣವನ್ನು ತೆರಿಗೆಯಿಂದ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಸೈನಿಕರ ಕಲ್ಯಾಣಕ್ಕಾಗಿ ಒಂದು ನಿಧಿಯನ್ನು ಸ್ಥಾಪನೆ ಮಾಡಬೇಕೆಂಬ ಅಗತ್ಯತೆಯನ್ನು ಮನಗಂಡ ಸರ್ಕಾರ, 1947ರಿಂದ ಪ್ರತಿ ವರ್ಷ ಡಿ.7ರಂದು ಶಸ್ತ್ರಾಸ್ತ್ರ ಪಡೆಗಳ ಧ್ವಜದಿನವನ್ನು ಆಚರಣೆಗೆ ತಂದಿತು. ಈ ಆಚರಣೆಯ ಮೂಲ ಉದ್ದೇಶವೆಂದರೆ, ಸೇನೆಯ ಧ್ವಜವನ್ನು ಜನರಿಗೆ ನೀಡುವುದು ಮತ್ತು ಅದರ ಬದಲಾಗಿ ಜನರಿಂದ ಸ್ವಯಂಪ್ರೇರಿತ ದೇಣಿಗೆಯನ್ನು ಪಡೆದುಕೊಳ್ಳುವುದು.
ಯುದ್ಧದಲ್ಲಿ ಆದ ನಷ್ಟವನ್ನು ಸರಿದೂಗಿಸುವುದು, ಮಿಲಿಟರಿ ಸಿಬ್ಬಂದಿ ಮತ್ತು ಅವರ ಕಲ್ಯಾಣ, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಕಲ್ಯಾಣ-ಈ ಮೂರು ಉದ್ದೇಶಗಳಿಗಾಗಿ ಸಂಗ್ರಹವಾದ ದೇಣಿಗೆಯನ್ನು ಬಳಸಲಾಗುತ್ತದೆ.
Spread the message of #ArmedForcesWeek2018; contribute to Armed Forces Flag Day Fund.
To make contribution, visit https://t.co/wV3pHIEoJ5 pic.twitter.com/YaybRzXooE— NSitharamanOffice (@nsitharamanoffc) December 6, 2018
source: navbharattimes.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.