ಗಾಂಧಿನಗರ: ಗುಜರಾತ್ನ ಗಾಂಧೀನಗರದಲ್ಲಿನ ಅಕ್ಷರಧಾಮ ಸ್ವಾಮಿ ನಾರಾಯಣ ದೇಗುಲದಲ್ಲಿ ಇತಿಹಾಸ ನಿರ್ಮಾಣ ಮಾಡಲಾಗಿದೆ. ಖ್ಯಾತ ಹೃದಯತಜ್ಞ ಡಾ. ತೇಜಸ್ ಪಟೇಲ್ ಅವರು ದೇವಾಲಯದ ಆವರಣದಲ್ಲಿ ಕುಳಿತು, 32 ಕಿಮೀ ದೂರದಲ್ಲಿರುವ ಅಪೆಕ್ಸ್ ಆಸ್ಪತ್ರೆಯ ಆಪರೇಶನ್ ಥಿಯೇಟರ್ನಲ್ಲಿದ್ದ ಮಧ್ಯ ವಯಸ್ಸಿನ ಮಹಿಳೆಯೊಬ್ಬರಿಗೆ ಆಂಜಿಯೋಪ್ಲಾಸ್ಟಿ ನೆರವೇರಿಸಿದ್ದಾರೆ.
ಜಗತ್ತಿನ ಮೊತ್ತ ಮೊದಲ ಇನ್ ಹ್ಯೂಮನ್ ಟೆಲಿರೊಬೊಟಿಕ್ ಕರೋನರಿ ಇಂಟರ್ವೆನ್ಶನ್ನಿಂದ ಮಾಡಿದ ಆಂಜಿಯೋಪ್ಲಾಸ್ಟಿ ಇದಾಗಿದೆ. ಆಪರೇಶನ್ ಥಿಯೇಟರ್ನಲ್ಲಿನ ಕಥ್ ಲ್ಯಾನ್ನಲ್ಲಿರುವ ಇಂಟರ್ನೆಟ್ ಆಧಾರಿತ ರೋಬೋಟಿಕ್ ಆರ್ಮ್ ತಂತ್ರಜ್ಞಾನವನ್ನು ಬಳಸಿ ಇದನ್ನು ನೆರವೇರಿಸಲಾಗಿದೆ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯ ಸಹಾಯಕ್ಕೆ ಧಾವಿಸುವಂತೆ ಆಪರೇಶನ್ ಥಿಯೇಟರ್ನಲ್ಲಿ ವೈದ್ಯರನ್ನು ನಿಯೋಜಿಸಿಯೇ, ತೇಜಸ್ ಪಟೇಲ್ ಈ ಆಂಜಿಯೋಪ್ಲಾಸ್ಟಿಯನ್ನು ನೆರವೇರಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮಹಿಳೆ ಹೃದಯಾಘಾತಕ್ಕೆ ಒಳಗಾಗಿದ್ದರು, ಅವರ ಅಪಧಮನಿಯಲ್ಲಿದ್ದ ಬ್ಲಾಕೇಜ್ ನಿವಾರಿಸಲು ಆಂಜಿಯೋಪ್ಲಾಸ್ಟಿಯನ್ನು ನೆರವೇರಿಸಲಾಗಿದೆ. ರೋಬೋಟಿಕ್ ಪ್ರಕ್ರಿಯೆಯಿಂದ ಅವರ ದೇಹದಲ್ಲಿದ್ದ ಮತ್ತೊಂದು ಬ್ಲಡ್ ವೆಸಲ್ಸ್ನ್ನೂ ತೆಗೆದು ಹಾಕಲಾಗಿದೆ.
ಟೆಲಿರೋಬೋಟಿಕ್ ಟೆಲಿಮೆಡಿಸಿನ್ ಮತ್ತು ರೋಬೋಟಿಕ್ಸ್ನ ಸಂಗಮವಾಗಿದೆ. ಕುಗ್ರಾಮದಲ್ಲಿರುವ ಜನರನ್ನು ತುರ್ತು ಪರಿಸ್ಥತಿಯಲ್ಲಿ ಬದುಕಿಸುವ ಸಂಭಾವ್ಯತೆ ಇದಕ್ಕಿದೆ ಎಂದು ಡಾ.ತೇಜಸ್ ಹೇಳಿದ್ದಾರೆ.
source: www.newsrain.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.