ನವದೆಹಲಿ: ಬ್ಯಾಂಕುಗಳಿಗೆ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿ ದೇಶ ಬಿಟ್ಟು ತೆರಳಿರುವ ಮದ್ಯದ ದೊರೆ ವಿಜಯ್ ಮಲ್ಯ, ಇದೀಗ ತಾನು ಪಡೆದ ಬ್ಯಾಂಕ್ ಸಾಲಗಳ ಶೇ.100ರಷ್ಟು ಅಸಲನ್ನು ತೀರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಬಡ್ಡಿ ನೀಡದೆ ಕೇವಲ ಅಸಲನ್ನು ಪಾವತಿಮಾಡುವ ನನ್ನ ಆಫರ್ನ್ನು ಒಪ್ಪಿಕೊಳ್ಳುವಂತೆ ಅವರು ಬ್ಯಾಂಕುಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಅವರನ್ನು ಗಡಿಪಾರು ಮಾಡಬೇಕೇ ಅಥವಾ ಬೇಡವೇ ಎಂದು ಯುಕೆ ಕೋರ್ಟ್ ಆದೇಶ ನೀಡಲು 5 ದಿನ ಉಳಿದಿರುವಂತೆ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ.
ಸರಣಿ ಟ್ವಿಟ್ಗಳನ್ನು ಮಾಡಿರುವ ಅವರು, ಬ್ಯಾಂಕುಗಳಿಂದ ಪಡೆದ ಹಣ ಕಿಂಗ್ಫಿಶರ್ ಏರ್ಲೈನ್ಸ್ನ ಇಂಧನ ವೆಚ್ಚಕ್ಕೆಯೇ ಖರ್ಚಾಯಿತು. ಇಂಧನ ದರ ಬೇಕಾಬಿಟ್ಟಿ ಏರಿದ್ದೆ ಕಿಂಗ್ಫಿಶರ್ ಏರ್ಲೈನ್ಸ್ ದುರಂತ ಅಂತ್ಯ ಕಾಣಲು ಕಾರಣ ಎಂದಿದ್ದಾರೆ.
ಸದ್ಯ ಯುಕೆಯಲ್ಲಿರುವ ಮಲ್ಯರನ್ನು ಭಾರತಕ್ಕೆ ಕರೆ ತರಲು ಹಲವಾರು ಯತ್ನಗಳನ್ನು ನಡೆಸಲಾಗುತ್ತಿದೆ. ಇದರಿಂದ ಅವರು ವಿಚಲಿತಗೊಂಡಿದ್ದಾರೆ ಎನ್ನಲಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.