ಜೈಪುರ: ಒಬ್ಬ ಚಾಯ್ವಾಲ ಗಾಂಧಿ ಕುಟುಂಬವನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ ಎಂದು ಕಾಂಗ್ರೆಸ್ ಪಕ್ಷ ಸಿಟ್ಟುಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣಾ ಅಖಾಡ ರಾಜಸ್ಥಾನದ ಸುಮೇರ್ಪುರದಲ್ಲಿ ಕೊನೆಯ ಹಂತದ ಪ್ರಚಾರ ಕಾರ್ಯ ನಡೆಸಿದ ಅವರು, ಜಾಮೀನು ಪಡೆದು ಹೊರಗಿರುವವರ ಕೈಗೆ ರಾಜಸ್ಥಾನವನ್ನು ನೀಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.
’70 ವರ್ಷಗಳಲ್ಲಿ ಸಮಾಜವನ್ನು ಹಲವು ಇಬ್ಭಾಗಗಳನ್ನಾಗಿ ಮಾಡಿದ ಕಾಂಗ್ರೆಸ್, ರಾಜ್ಯದ ಜನರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ?, ಮೊದಲು 70 ವರ್ಷಗಳಲ್ಲಿ ಮಾಡಿದ ಕೆಲಸದ ವರದಿ ನೀಡಿ, ಅಮೇಲೆ ನಮ್ಮ ನಾಲ್ಕೂವರೆ ವರ್ಷದ ವರದಿಯನ್ನು ಕೇಳಿ’ ಎಂದರು.
ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ನಾನು ಜನಿಸಿಲ್ಲ, ಜೀವನದಲ್ಲಿ ಕಷ್ಟದ ಸ್ಥಿತಿಗಳನ್ನು ನಾನು ಎದುರಿಸಿದ್ದೇನೆ ಎಂದ ಅವರು, ಕಾಂಗ್ರೆಸ್ ಶಾಪಗ್ರಸ್ಥವಾಗಿದೆ, ಇನ್ನು ಅದಕ್ಕೆ ಜನಸೇವೆ ಮಾಡಲು ಸಾಧ್ಯವಿಲ್ಲ ಎಂದರು.
ರಾಜಸ್ಥಾನದ ಪ್ರತಿ ಪೋಲಿಂಗ್ ಬೂತ್ಗಳನ್ನು ನಾವು ಜಯಿಸುತ್ತೇವೆ ಎಂಬ ಭರವಸೆ ಇದೆ ಎಂದರು.
source: zeenews.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.