ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ವಿಭಜನೆಯ ವೇಳೆ, ಕರ್ತಾರ್ಪುರದ ಮಹತ್ವದ ಬಗ್ಗೆ ಕಾಂಗ್ರೆಸ್ಸಿಗರು ನಿರ್ಲಕ್ಷ್ಯವಹಿಸಿದ ಕಾರಣ ಇಂದು ಕರ್ತಾರ್ಪುರ ಪಾಕಿಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ರಾಜಸ್ಥಾನದ ಹನುಮಾನ್ಘರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಕರ್ತಾರ್ಪುರ್ ಸಾಹೀಬ್ಗೆ ಸಿಖ್ಖರು ಸುರಕ್ಷಿತವಾಗಿ ಭೇಟಿಕೊಡುವ ನಿಟ್ಟಿನಲ್ಲಿ ಯಾಕೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ ? 1947ರಲ್ಲಿ ಕರ್ತಾರ್ಪುರ್ ಭಾರತದಲ್ಲಿರಬೇಕು ಎಂದು ಯಾಕೆ ಅದು ಯೋಚಿಸಿಲ್ಲ? ಯಾಕೆ 70 ವರ್ಷಗಳಲ್ಲಿ ಏನನ್ನೂ ಮಾಡಲಾಗಿಲ್ಲ? ಕರ್ತಾರ್ಪುರ್ ಕಾರಿಡಾರ್ ಪೂರ್ಣಗೊಂಡರೆ ಅದರ ಶ್ರೇಯಸ್ಸು ಮತದಾರರಿಗೆ ಸಲ್ಲಬೇಕೇ ಹೊರತು ಮೋದಿಗಲ್ಲ’ ಎಂದಿದ್ದಾರೆ.
ಹಿಂದಿನ ಕಾಂಗ್ರೆಸ್ ನಾಯಕರು ದೂರದೃಷ್ಟಿ ಹೊಂದಿದ್ದರೆ ಕರ್ತಾರ್ಪುರ್ ಇಂದು ಭಾರತದಲ್ಲಿರುತ್ತಿತ್ತು ಎಂದ ಅವರು, ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ತಿದ್ದುವುದು ನನ್ನ ಅದೃಷ್ಟ ಎಂದರು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.