ನವದೆಹಲಿ: ಇಂದು ನೌಕಾ ದಿನ. ಭಾರತದ ಸಮುದ್ರ ತೀರವನ್ನು ಕಣ್ಣರೆಪ್ಪೆಯಂತೆ ಕಾಯುವ ಹೆಮ್ಮೆಯ ನೌಕಾ ಸಿಬ್ಬಂದಿಯ ತ್ಯಾಗ, ಸಾಹಸವನ್ನು ಸ್ಮರಿಸಬೇಕಾದ ದಿನ. 1971ರ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ನೌಕೆಯ ಯುದ್ಧನೌಕೆಗಳು ಕರಾಚಿ ಬಂದರಿನ ಮೇಲೆ ಯಶಸ್ವಿ ಆಕ್ರಮಣ ನಡೆಸಿದವು ಮತ್ತು ಪಶ್ಚಿಮ ಕರಾವಳಿಯಲ್ಲಿ ಪಾಕಿಸ್ಥಾನದ ಕಾರ್ಯಾಚರಣೆಯನ್ನು ಹತ್ತಿಕ್ಕಿದ್ದವು. ಈ ಸಾಹಸದ ಸ್ಮರಣಾರ್ಥ ಪ್ರತಿವರ್ಷ ಡಿಸೆಂಬರ್ 4ರಂದು ನೌಕಾದಿನವನ್ನು ಆಚರಿಸಲಾಗುತ್ತದೆ.
ಶಾಂತಿಯ ಸಂದರ್ಭದಲ್ಲೂ ದೇಶದ ಸಮುದ್ರ ತೀರವನ್ನು ಶತ್ರುಗಳಿಂದ ಸಂರಕ್ಷಿಸಿಡಬೇಕಾದ ನಿರಂತರ ಕಾರ್ಯವನ್ನು ನೌಕೆ ಮಾಡುತ್ತದೆ. ಅಷ್ಟೇ ಅಲ್ಲದೇ, ಪ್ರಾಕೃತಿಕ ವಿಪತ್ತಿನಂತಹ ಸಂದರ್ಭಗಳಲ್ಲಿ ಮಾನವೀಯ ಕಾರ್ಯಗಳನ್ನು ಮಾಡುವುದರಲ್ಲಿಯೂ ನೌಕೆ ಎತ್ತಿದ ಕೈ.
ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು, ‘ಭಾರತೀಯ ನೌಕಾ ಸೇನೆಯು ಹಿಂದೂ ಮಹಾಸಾಗರಕ್ಕೆ ಭದ್ರತೆಯನ್ನು ಒದಗಿಸುವ ಪ್ರಮುಖ ಪಡೆಯಾಗಿದೆ ಮತ್ತು ಅದಕ್ಕೆ ಸಾಂಪ್ರದಾಯಿಕ, ಅಸಾಂಪ್ರದಾಯಿಕ ಬೆದರಿಕೆಗಳನ್ನು ಎದುರಿಸುವ ಸಂಪೂರ್ಣ ಸಾಮರ್ಥ್ಯವಿದೆ’ ಎಂದಿದ್ದಾರೆ.
ಇದುವರೆಗೆ ನೌಕೆ 44 ಪೈರಸಿ ಪ್ರಯತ್ನಗಳನ್ನು ಹತ್ತಿಕ್ಕಿದ್ದು, 120 ಪೈರೆಟ್ಗಳನ್ನು ಬಂಧಿಸಿದೆ. 2008ರಿಂದ 70 ಯುದ್ಧನೌಕೆಗಳನ್ನು ನಿಯೋಜಿಸಲಾಗಿದ್ದು, ಇವುಗಳು 3440 ಹಡಗು ಮತ್ತು 25 ಸಾವಿರ ನಾವಿಕರನ್ನು ಸುರಕ್ಷಿತವಾಗಿ ಕಾಯುತ್ತಿದೆ ಎಂದಿದ್ದಾರೆ.
ನೌಕಾದಿನದ ಅಂಗವಾಗಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ. ನೌಕೆಯ ಶೌರ್ಯವನ್ನು ಕೊಂಡಾಡಿದ್ದಾರೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.