ಮನುಷ್ಯ ಎಂದಿಗೂ ಗೋವಿನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವೇ ಇಲ್ಲ. ಗೋವಿನ ಹಾಲಿನಿಂದ ಹಿಡಿದು ಮೂತ್ರ, ಸೆಗಣಿ ಮನುಷ್ಯನಿಗೆ ಬೇಕೇ ಬೇಕು. ಅದು ಆತನ ಬದುಕಿನ ಆಸರೆಯೂ ಹೌದು. ಹಾಲು ಮಾನವನ ದೇಹಕ್ಕೆ ಅತ್ಯವಶ್ಯಕ ಪೋಷಕಾಂಶಗಳನ್ನು ಒದಗಿಸಿದರೆ, ಸೆಗಣಿ ಗೊಬ್ಬರವಾಗಿ ಕೃಷಿಗೆ ಬೇಕೇ ಬೇಕು, ಗೋ ಮೂತ್ರದಿಂದ ವಿವಿಧ ಔಷಧಿಗಳು ತಯಾರಾಗುವುದು ನಮಗೇ ಗೊತ್ತೇ ಇದೆ.
ಈಗಾಗಲೇ ಸಂಶೋಧಕರು ಗೋವಿನ ಮೂತ್ರದಲ್ಲಿ ಕ್ಯಾನ್ಸರ್ಕಾರಕವನ್ನು ತಡೆಯುವ ಗುಣಗಳಿವೆ ಎಂದು ಪತ್ತೆ ಹಚ್ಚಿದ್ದಾರೆ. ಇದೀಗ ಗೋವಿನ ಮೂತ್ರಕ್ಕೆ ಹೃದಯರೋಗ ದೂರ ಮಾಡುವ ಮತ್ತು ಡಯಾಬಿಟಿಸ್ನಿಂದಾಗುವ ಗಾಯಗಳನ್ನು ವಾಸಿ ಮಾಡುವ ಗುಣವಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಭವನಗರದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸರ್ ತಕಾತ್ಸಿಂಹ್ಜಿ ಜನರಲ್ ಹಾಸ್ಪಿಟಲ್ ನಡೆಸಿದ ಅಧ್ಯಯನದಲ್ಲಿ ಗೋಮೂತ್ರಕ್ಕೆ ಡಯಾಬಿಟಿಕ್ ಗಾಯಗಳನ್ನು ವಾಸಿ ಮಾಡುವ ಗುಣವಿದೆ ಎಂದು ತಿಳಿದು ಬಂದಿದೆ. ಗೋಮೂತ್ರದಲ್ಲಿ ಗಾಯ ಗುಣಪಡಿಸಲು ಅತ್ಯವಶ್ಯಕವಾದ ಪ್ರೋಟಿನ್ ಕಾಲಜನ್ ಇದೆ ಎಂದು ಸಂಶೋಧಕರು ಹೇಳಿದ್ದಾರೆ.
ಹಿಂದೂಗಳು ಗೋವನ್ನು ಪೂಜನೀಯವಾಗಿ ನೋಡುತ್ತಾ ಬಂದಿದ್ದು, ಅದರ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬುದನ್ನು ಬಹಳ ಹಿಂದೆಯೇ ಅರಿತುಕೊಂಡಿದ್ದರು.
ಗೋಮೂತ್ರ ಸೇವನೆಯಿಂದ ಅಜೀರ್ಣ, ಹೃದಯರೋಗ, ಡಯೇರಿಯಾ, ಹಳದಿರೋಗ, ಚರ್ಮರೋಗಗಳನ್ನು ತಡೆಯುವ ಶಕ್ತಿಯಿದೆ ಎಂದು ನಂಬಲಾಗಿದೆ.
source: timesofindia.indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.