ನವದೆಹಲಿ: ದೇಶದ ಅತ್ಯಂತ ಹಿರಿಯ ಪಕ್ಷ ಎನಿಸಿರುವ ಕಾಂಗ್ರೆಸ್ನ ಸ್ವಜನಪಕ್ಷಪಾತ ಮತ್ತು ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದು, ಗಾಂಧಿ ಎಂಬ ಸರ್ನೇಮ್ ಇಲ್ಲದೇ ಇರುತ್ತಿದ್ದರೆ ರಾಹುಲ್ ಗಾಂಧಿ ಕಾಂಗ್ರೆಸ್ನ ಜಿಲ್ಲಾಧ್ಯಕ್ಷನೂ ಆಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆಜ್ತಕ್ನ ಪಂಚಾಯತ್ ರಾಜಸ್ಥಾನ್ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅತ್ಯಂತ ಹಳೆಯ ಪಕ್ಷ, ಈಗ ರಾಹುಲ್ ಅದರ ಅಧ್ಯಕ್ಷ. ಅವರಿಗಿಂತ ಮೊದಲು ನೆಹರೂ, ಸರ್ದಾರ್ ಪಟೇಲ್ರಂತಹ ಗಣ್ಯರು ಈ ಹುದ್ದೆಯನ್ನು ಅಲಂಕರಿಸಿದ್ದರು ಮತ್ತು ಅದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು. ಆದರೆ ಒಂದು ಮಾತನ್ನು ಖಮಡಿತವಾಗಿಯೂ ಹೇಳುತ್ತೇನೆ, ಒಂದು ವೇಳೆ ರಾಹುಲ್ ಗಾಂಧಿ ಕುಟುಂಬದಲ್ಲಿ ಜನಿಸದೇ ಇರುತ್ತಿದ್ದರೆ, ಆ ಪಕ್ಷದ ಜಿಲ್ಲಾಧ್ಯಕ್ಷನೂ ಆಗುತ್ತಿರಲಿಲ್ಲ ಎಂದಿದ್ದಾರೆ.
ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಕೌಲ್ ಬ್ರಾಹ್ಮಣ, ಗುಜರಾತಿನಲ್ಲಿ ಅವರು ಶಿವಭಕ್ತ. ಭಾರತದಲ್ಲಿ ಎಲ್ಲಾ ನಾಯಕರು ಅವರ ನಂಬಿಕೆಯನ್ನು ಪಾಲಿಸಲು ಸ್ವತಂತ್ರರು ಎಂದಿದ್ದಾರೆ.
ಆದರೆ ಬಿಜೆಪಿ ಕಾಂಗ್ರೆಸ್ಗೆ ವ್ಯತಿರಿಕ್ತವಾಗಿದ್ದು, ಹಿಂದುಳಿದ ಕಾರ್ಯಕರ್ತರನ್ನೂ ಮುನ್ನಲೆಗೆ ಬರುವಂತೆ ಮಾಡಿದೆ ಎಂದಿದ್ದಾರೆ.
www.indiatoday.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.