ನವದೆಹಲಿ: ಇಡೀ ದೇಶದ ಪ್ರತಿ ಮನೆಯನ್ನೂ ಇದೇ ವರ್ಷದ ಡಿಸೆಂಬರ್ 31ರೊಳಗೆ ಸಂಪೂರ್ಣ ವಿದ್ಯುದೀಕರಣಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಟಾರ್ಗೆಟ್ ರೂಪಿಸಿದೆ.
ಸೌಭಾಗ್ಯ ಯೋಜನೆಯಡಿ ಈಗಾಗಲೇ ಕೇಂದ್ರ ಸರ್ಕಾರ 2.10 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದೆ. ಇದರಿಂದಾಗಿ 8 ರಾಜ್ಯಗಳು ಶೇ.100ರಷ್ಟು ವಿದ್ಯುದೀಕರಣಗೊಂಡಿದೆ. ಮಧ್ಯಪ್ರದೇಶ, ತ್ರಿಪುರಾ, ಬಿಹಾರ, ಜಮ್ಮು ಕಾಶ್ಮೀರ, ಮಿಜೋರಾಂ, ಸಿಕ್ಕಿಂ, ತೆಲಂಗಾಣ, ಪಶ್ಚಿಮಬಂಗಾಳ ಈಗ ಸಂಪೂರ್ಣ ವಿದ್ಯುದೀಕರಣಗೊಂಡ ರಾಜ್ಯಗಳಾಗಿ ಹೊರಹೊಮ್ಮಿವೆ.
ಡಿ.31ರೊಳಗೆ ಇಡೀ ದೇಶದ ಪ್ರತಿ ಮನೆಯೂ ವಿದ್ಯುದೀಕರಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಆರ್.ಕೆ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಸಮೀಕ್ಷೆ, ಅಂಕಿಅಂಶಗಳ ಆಧಾರದಲ್ಲಿ ರಾಜ್ಯಗಳು ವಿದ್ಯುತ್ ಸಂಪರ್ಕದ ಅಂದಾಜು ಲೆಕ್ಕ ಹಾಕುತ್ತಿದ್ದವು. ಆದರೆ ಈ ಬಾರಿ ಹಾಗಲ್ಲ, ನಾವು ಎಲ್ಲಾ ಜಿಲ್ಲೆಗಳ ಎಲ್ಲಾ ಮನೆಗಳ ವಿದ್ಯುದೀಕರಣಕ್ಕೆ ಟಾರ್ಗೆಟ್ ಹಾಕಿದ್ದೇವೆ ಎಂದಿದ್ದಾರೆ.
source: indianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.