ನವದೆಹಲಿ: ಅರುಣಾಚಲ ಪ್ರದೇಶದ ರಾಜ್ಯಪಾಲ, ನಿವೃತ್ತ ಬ್ರಿಗೇಡಿಯರ್ ಬಿ.ಡಿ ಮಿಶ್ರಾ ಅವರು ತುರ್ತು ವೈದ್ಯಕೀಯ ಸೇವೆಯ ಅಗತ್ಯವಿದ್ದ ಗರ್ಭಿಣಿ ಸ್ತ್ರೀಯನ್ನು ತಮ್ಮ ಹೆಲಿಕಾಫ್ಟರ್ ಮೂಲಕ ತವಾಂಗ್ನಿಂದ ಇಟನಗರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಮೂಲಕ ಉನ್ನತ ಅಧಿಕಾರದಲ್ಲಿರುವ ವ್ಯಕ್ತಿಯೂ ತನ್ನ ಮಾನವೀಯ ಕರ್ತವ್ಯಗಳನ್ನು ಮರೆಯಬಾರದು ಎಂದು ಇತರರಿಗೆ ತೋರಿಸಿಕೊಟ್ಟಿದ್ದಾರೆ.
ತಮ್ಮ ಹೆಲಿಕಾಫ್ಟರ್ ತೆಝ್ಪುರದಲ್ಲಿ ರಿಫ್ಯೂಲಿಂಗ್ ಬಳಿಕ ಸಮಸ್ಯೆಗೀಡಾದ ಪರಿಣಾಮ ತಕ್ಷಣವೇ ಅವರು ಸೇನೆಯ ಹೆಲಿಕಾಫ್ಟರ್ನ್ನು ಅಲ್ಲಿಗೆ ಕರೆಯಿಸಿ, ಮಹಿಳೆ ಮತ್ತು ಆಕೆಯ ಪತಿಯನ್ನು ಇಟನಗರ್ಗೆ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಇಟನಗರ್ನಲ್ಲಿ ಅವರು ಹೆಲಿಕಾಫ್ಟರ್ನಿಂದ ಇಳಿಯುತ್ತಿದ್ದಂತೆ ಅಲ್ಲಿ ಲೇಡಿ ಗೈನಕಾಲಜಿಸ್ಟ್ನ್ನೂ ಸಜ್ಜುಗೊಳಿಸಿದ್ದರು. ಬಳಿಕ ತಾವು ತಡವಾಗಿ ಮತ್ತೊಂದು ಹೆಲಿಕಾಫ್ಟರ್ನಲ್ಲಿ ಆಗಮಿಸಿದ್ದಾರೆ.
ಇಟನಗರದ ಹೀಮಾ ಆಸ್ಪತ್ರೆಯಲ್ಲಿ ಮಹಿಳೆಗೆ ತುರ್ತು ಸಿಝರಿಯನ್ ಡೆಲಿವರಿ ಮಾಡಿಸಲಾಗಿದೆ.
ತವಾಂಗ್ನಿಂದ ಇಟನಗರಗೆ ರಸ್ತೆ ಮೂಲಕ ಆಗಮಿಸಲು 15 ಗಂಟೆಗಳ ದಾರಿಯಿದೆ. ಗರ್ಭಿಣಿ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಆಕೆಗೆ ತುರ್ತು ಚಿಕಿತ್ಸೆ ಅವಸ್ಯಕತೆಯಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆಗೆ ಬೇಕಾದ ಅವಶ್ಯಕ ಸೇವೆ ಲಭ್ಯವಿರಲಿಲ್ಲ. ರಾಜ್ಯಪಾಲರ ಮಾನವೀಯ ಗುಣದಿಂದ ಹೆಲಿಕಾಫ್ಟರ್ ಮೂಲಕ ಆಕೆ 2 ಗಂಟೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಸೇವೆ ಪಡೆದುಕೊಂಡಿದ್ದಾರೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.