ನವದೆಹಲಿ: ಸಾಂಪ್ರದಾಯಿಕ ಕಾರ್ಮಿಕರು ಮತ್ತು ಅತ್ಯಾಧುನಿಕ ವಿಧಾನಗಳು ಇವೆರಡನ್ನೂ ಒಗ್ಗೂಡಿಸುವುದರಿಂದ ಭಾರತವು ಟೆಕ್ಸ್ಟೈಲ್ ಉದ್ಯಮದಲ್ಲಿ ಜಗತ್ತನ್ನೇ ಹಿಂದಿಕ್ಕಿ ವಿಶ್ವ ನಾಯಕನಾಗಿ ಹೊರಹೊಮ್ಮಬಲ್ಲದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸಿಐಟಿಐ ಡೈಮಂಡ್ ಜುಬ್ಲಿ ಸೆಲೆಬ್ರೇಷನ್ನ ಅಂಗವಾಗಿ ಜರುಗಿದ ‘ಸಿಐಟಿಐ ಗ್ಲೋಬಲ್ ಟೆಕ್ಸ್ಟೈಲ್ ಕಾನ್ಕ್ಲೇವ್ 2018’ನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವಾರು ಗಣ್ಯರು ಇದರಲ್ಲಿ ಭಾಗಿಯಾಗಿದ್ದರು.
ವಿದೇಶಿ ಪ್ರವಾಸದ ವೇಳೆ ನಾನು ಭೇಟಿಯಾದ ಯುರೋಪಿಯನ್, ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಮುಂತಾದ ನಾಯಕರು ಭಾರತದ ಅಭಿವೃದ್ಧಿಯ ಪಥವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದರು.
ಅಲ್ಲದೇ ಆರ್ಥಿಕ ಅಪರಾಧಿಗಳನ್ನು ದಂಡಿಸಲು ವಿಶ್ವಸಂಸ್ಥೆ, ವಿಶ್ವ ಸಮುದಾಯ ತಾಂತ್ರಿಕ ನಿಯಮವನ್ನು ರೂಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.