ನವದೆಹಲಿ: ಭಾರತ ಪಾಕಿಸ್ಥಾನದ ವಿಭಜನೆಯ ವೇಳೆ ಬೇರೆ ಬೇರೆಯಾಗಿದ್ದ ಒಡಹುಟ್ಟಿದವರು 7 ದಶಕಗಳ ಬಳಿಕ ಒಂದಾದ ಹೃದಯಸ್ಪರ್ಶಿ ಘಟನೆ ಪಾಕಿಸ್ಥಾನದ ಗುರುದ್ವಾರ ಜನಮ್ ಅಸ್ತಾನ, ನನ್ಕಾನ ಸಾಹೀಬ್ನಲ್ಲಿ ಭಾನುವಾರ ನಡೆದಿದೆ.
ಡೇರಾ ಬಾಬಾ ನಾನಕ್ ಸಮೀಪದ ಪರಚ ಗ್ರಾಮದ ಕುಟುಂಬ ವಿಭಜನೆಯ ವೇಳೆ ಪಾಕಿಸ್ಥಾನಕ್ಕೆ ವಲಸೆ ಹೋಗಿತ್ತು, ಈ ವೇಳೆ ಕುಟುಂಬದ ಮಗ ನಾಪತ್ತೆಯಾಗಿದ್ದ. ಇದೀಗ ಏಳು ದಶಕಗಳ ಬಳಿಕ ಕುಟುಂಬದ ಇಬ್ಬರು ಸಹೋದರಿಯರು ಕಳೆದುಹೋಗಿದ್ದ ತಮ್ಮ ಸಹೋದರನನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಹಿಂದಿನ ನೆರೆಹೊರೆಯವರನ್ನು ಭೇಟಿಯಾಗಿ ಅವರಿಂದ ತಮ್ಮ ಸಹೋದರ ಬೀಂತ್ ಸಿಂಗ್ನ ಮಾಹಿತಿ ಪಡೆದ ಉಲ್ಫತ್ ಬೀಬಿ ಮತ್ತು ಮೈರಾಜ್ ಬೀಬಿ ಆತನೊಂದಿಗೆ ಪತ್ರ ಸಂಪರ್ಕ ಸಾಧಿಸಿದ್ದರು.
ಮೊನ್ನೆ ಭಾನುವಾರ ಸಿಖ್ ಜಾಥಾದ ವೇಳೆ ಇವರು ಸಹೋದರ ಬೀಂತ್ ಸಿಂಗ್ನನ್ನು ಭೇಟಿಯಾಗಿ ಬಿಗಿದಪ್ಪಿಕೊಂಡರು. 7 ದಶಕಗಳ ಬಳಿಕದ ಈ ಭೇಟಿ ಹೃದಯಸ್ಪರ್ಶಿಯಾಗಿತ್ತು.
ಇದೀಗ ಈ ಸಹೋದರಿಯರು ತಮ್ಮ ಸಹೋದರನ ಪತ್ನಿ ಮಕ್ಕಳನ್ನು ಕಾಣಲು ಭಾರತಕ್ಕೆ ತೆರಳಲು ವೀಸಾ ನೀಡುವಂತೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ಗೆ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.