ಬೆಳ್ತಂಗಡಿ: ವಿವಿಧ ಸಂಸ್ಥೆಗಳು ಮತ್ತು ಜನರನ್ನು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಭಿನಂದನೀಯ ಹಾಗೂ ಅನುಕರಣೀಯ ಎಂದು ರೋಟರಿ ವಲಯ 5ರ ಸಹಾಯಕ ಗವರ್ನರ್ ಅಶ್ವನಿ ಕುಮಾರ್ ರೈ ಅವರು ಶ್ಲಾಘಿಸಿದರು.
ಶ್ರೀ ಅಶ್ವನಿ ಕುಮಾರ್ ರೈ ಅವರು ಬೆಳ್ತಂಗಡಿ ರೋಟರಿ ಕ್ಲಬ್ ಇತ್ತೀಚೆಗೆ ಬೆಳ್ತಂಗಡಿಯ ಸುಬ್ರಮಣ್ಯ ಸಭಾಭವನದಲ್ಲಿ ಆಯೋಜಿಸಿದ ಅಭಿವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ರೋಟರಿ ಕ್ಲಬ್ ಬೆಳ್ತಂಗಡಿಯು 2014-15ನೇ ಸಾಲಿನಲ್ಲಿ ರೋಟರಿ ಜಿಲ್ಲೆ 3180ರಲ್ಲಿ ಅತ್ಯಧಿಕ 23 ಸೇವಾ ಪುರಸ್ಕಾರಗಳನ್ನು ಪಡೆದುಕೊಂಡು ಸರ್ವಾಂಗೀಣ ಸೇವಾ ಅತ್ಯುತ್ತಮ ಜಿಲ್ಲಾ ಪ್ರಶಸ್ತಿಯೊಂದಿಗೆ ಪುರಸ್ಕೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಸಹಕರಿಸಿದವರಿಗೆ ಅಭಿವಂದನಾ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿಯ ಪೂರ್ವಾಧ್ಯಕ್ಷರಾದ ಡಾ.ಬಿ.ಯಶೋವರ್ಮ, ಡಾ.ಗೋಪಾಲಕೃಷ್ಣ ಹಾಗೂ ಪ್ರತಾಪಸಿಂಹ ನಾಯಕ್ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು.
ರೋಟರಿ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ಅವರು ರೋಟರಿಯ ಸೇವಾ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುತ್ತಾ, ಸಹಾಯಕ ಗವರ್ನರ್ ಅಶ್ವನಿ ಕುಮಾರ್ ರೈ ಅವರ ಮಾರ್ಗದರ್ಶನ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಶ್ರೀ ಧ.ಮಂ ರೋಟರಿ ವೃತ್ತಿ ಮಾರ್ಗದರ್ಶನ ಕೇಂದ್ರ, ಸೆಲ್ಕೋ ಫೌಂಡೇಶನ್, ತಾಲೂಕು ವಕೀಲರ ಸಂಘಗಳ ಸಹಯೋಗ, ಮಾಧ್ಯಮಗಳ ಸಹಕಾರ ಮತ್ತು ರೋಟರಿ ಸಮುದಾಯ ದಳ, ರೋಟರಾಕ್ಟ್, ಇಂಟರಾಕ್ಟ್, ಆನ್ಸ್ ಹಾಗೂ ರೋಟರಿ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯಿಂದ 2014-15ರಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಅಶ್ವನಿ ಕುಮಾರ್ ದಂಪತಿಗಳನ್ನು ಬೆಳ್ತಂಗಡಿ ರೋಟರಿಯ ಪರವಾಗಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಆನ್ಸ್ನ ಶ್ರೀವಿದ್ಯಾ ಅಶ್ವನಿ ಕುಮಾರ್, ಆನ್ಸ್ ಕ್ಲಬ್ ಅಧ್ಯಕ್ಷೆ ಹೇಮಲತಾ, ಕಾರ್ಯದರ್ಶಿ ನವೀನಾ ಉಪಸ್ಥತರಿದ್ದರು. ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಎಂ.ವೈಕುಂಠ ಪ್ರಭು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.