ನವದೆಹಲಿ: ಎರಡು ವಷ೯ಗಳ ಹಿಂದೆ ತೀವ್ರ ಸ್ವರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಪಾಕಿಸ್ಥಾನದ ನವಜಾತ ಶಿಶು ಇಂದು ದೆಹಲಿ ಸಿಟಿ ಆಸ್ಪತ್ರೆಯ ವೈದ್ಯರ ಸಹಾಯದಿಂದಾಗಿ ಹೊಸ ಜೀವನವನ್ನು ಪಡೆದುಕೊಂಡು ಆರೋಗ್ಯವಾಗಿದೆ.
2016ರಲ್ಲಿ ದೈತ್ಯ ಹೃದಯದ ಅಸಾಧಾರಣ ಸಮಸ್ಯೆಯಿಂದ ಬಳಲುತ್ತಿದ್ದ ಪಾಕ್ ನ 14 ತಿಂಗಳ ಮಗುವನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಮಸ್ಯೆ ಕ್ಲಿಷ್ಟಕರವಾಗಿದ್ದರೂ, ಸವಾಲು ಸ್ವೀಕರಿಸಿ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ವೈದ್ಯರು ನೆರವೇರಿಸಿದ್ದರು.
ಈಗ ಎರಡು ವಷ೯ಗಳ ಬಳಿಕ ಆಸ್ಪತ್ರೆ ಪ್ರಕಟಣೆಯನ್ನು ಹೊರಡಿಸಿದ್ದು, ಮಗು ಆರೋಗ್ಯವಾಗಿದ್ದು, ಸಹಜ ಜೀವನ ನಡೆಸುತ್ತಿದೆ ಎಂದಿದೆ.
ಅಲ್ಲದೇ, ಆಸ್ಪತ್ರೆಯ ಈ ಕಾಯ೯ವನ್ನು ಪ್ರತಿಷ್ಟಿತ ಮೆಡಿಕಲ್ ಜನ೯ಲ್ ‘ದಿ ಆನಲ್ಸ್ ಆಫ್ ಥೊರಾಸಿಕ್ ಸಜ೯ರಿ’ ಕೇಸ್ ಸ್ಟಡಿಗಾಗಿ ತೆಗೆದುಕೊಂಡಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.