ಮಹಾತ್ಮ ಗಾಂಧೀಯವರ 150ನೇ ಜನ್ಮದಿನದ ಪ್ರಯುಕ್ತ ಮಹಾರಾಷ್ಟ್ರದ ಬಿಜೆಪಿ ಶಾಸಕರು 150 ಕಿಮೀ ನಡೆದು ಮತದಾರರನ್ನು ಸಂಪರ್ಕಿಸಿ, ಅವರೊಂದಿಗೆ ಸಂವಾದಿಸಲಿದ್ದಾರೆ.
ಮುಂಬಯಿ: ಮತದಾರರನ್ನು ಬೆಸೆಯುವ ಸಲುವಾಗಿ ಮಹಾರಾಷ್ಟ್ರ ಬಿಜೆಪಿ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ‘ಸಂಪರ್ಕ ಅಭಿಯಾನ’ದ ವೇಳೆ ಶಾಸಕರನ್ನು ಕನಿಷ್ಠ 150 ಕಿಮೀಯಷ್ಟು ನಡೆಸುವ ಯೋಜನೆ ಇದಾಗಿದೆ.
ಪ್ರತಿ ಬಿಜೆಪಿ ಶಾಸಕರು 150 ಕಿಮೀಯಷ್ಟು ಕಾಲ್ನಡಿಗೆ ಮೂಲಕ ನಡೆದು ಮತದಾರರೊಂದಿಗೆ ಉತ್ತಮ ಬೆಸುಗೆಯನ್ನು ಹೊಂದಬೇಕು ಎಂದು ಸೂಚನೆ ನೀಡಲಾಗಿದೆ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಅಂಗವಾಗಿ 150 ಕಿಮೀಗಳ ಟಾರ್ಗೆಟ್ನ್ನು ಶಾಸಕರಿಗೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 121 ಬಿಜೆಪಿ ಶಾಸಕರಿದ್ದು, ಇವರು ಜನರ ಮನೆ ಮನೆಗೆ ತೆರಳಿ ಅವರನ್ನು ಭೇಟಿಯಾಗಿ ಸಂವಾದಿಸಲಿದ್ದಾರೆ.
s0urce; Press Trust Of India
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.