ನವದೆಹಲಿ: ವಿಶ್ವದ 7ನೇ ಅದ್ಭುತವಾಗಿರುವ ತಾಜ್ ಮಹಲ್ ದಿನದಿಂದ ದಿನಕ್ಕೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ವಿಪರೀತಗೊಂಡಿರುವ ವಾಯುಮಾಲಿನ್ಯ ತಾಜ್ನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ತಾಜ್ಮಹಲ್ನ್ನು ಮಲಿನಗೊಳಿಸುತ್ತಿರುವ ಮಾಲಿನ್ಯಕಾರಕಗಳ ಬಗ್ಗೆ ಅಧ್ಯಯನ ನಡೆಸಲು ಐಐಟಿ ಕಾನ್ಪರವನ್ನು ನಿಯೋಜಿಸಿದೆ.
ಈ ಐಐಟಿಯ ಸಂಶೋಧಕರು, ತಾಜ್ ಮಹಲ್ನ್ನು ಹಾನಿಗೊಳಿಸುತ್ತಿರುವ ವಾಯುಮಾಲಿನ್ಯದ ರಾಸಾಯನಿಕ ನಿಕ್ಷೇಪಗಳು ಯಾವುದು ಎಂಬ ಬಗ್ಗೆ ಅಧ್ಯಯನ ನಡೆಸಲಿದೆ.
ಈ ಹಿಂದೆ ಅಧ್ಯಯನ ನಡೆಸದೇ ಇರುವಂತಹ ಆಯಾಮಗಳ ಬಗ್ಗೆ ಅಧ್ಯಯನವನ್ನು ಐಐಟಿ ಕಾನ್ಪುರ ನಡೆಸಲಿದೆ. ಯಮುನಾ ನದಿ ತಟದ ಧೂಳಿನ ವಿಧಾನ, ನದಿ ನೀರಿನಲ್ಲಿನ ಮಾಲಿನ್ಯಕಾರಕ ಇತ್ಯಾದಿಗಳ ಅಧ್ಯಯನವನ್ನು ಇದು ಒಳಗೊಳ್ಳಲಿದೆ.
source; Hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.