ಹೈದರಾಬಾದ್: ಆಂಧ್ರಪ್ರದೇಶದ ಬುಡಕಟ್ಟು ರೈತರು ತಯಾರಿಸಿದ ಭಾರತೀಯ ಕಾಫಿ ಬ್ಲೆಂಡ್ ‘ಅರಕು’ ಇದೀಗ ವಿಶ್ವಮಟ್ಟದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ‘Prix Epicures OR 2018 Award’ನಲ್ಲಿ ಬಂಗಾರದ ಪದಕವನ್ನು ಇದು ಜಯಿಸಿದೆ.
ಬುಡಕಟ್ಟು ರೈತರೇ ಹೆಚ್ಚಾಗಿ ಬೆಳೆಯುವ ಕಾಫಿಯಿಂದ ತಯಾರಾದ ‘ಅರಕು’ ಕಾಫಿ ಬ್ಲೆಂಡ್ ಭಾರತಕ್ಕೆ ಬಂಗಾರ ತಂದುಕೊಟ್ಟ ಮೊತ್ತ ಮೊದಲ ಕಾಫಿ ಬ್ಲೆಂಡ್ ಆಗಿದೆ. ಅತ್ಯಂತ ಪ್ರಖ್ಯಾತ ಸುಮಾತ್ರ, ಕೊಲೊಂಬೊ ಮತ್ತು ಇತರ ಕಾಫಿ ಬ್ಲೆಂಡ್ನ್ನು ಹಿಂದಿಕ್ಕಿ ಇದು ಪ್ರಶಸ್ತಿ ಬಾಚಿದ್ದು ಅತೀ ಮಹತ್ವದ್ದಾಗಿದೆ.
ಆಂಧ್ರದ ಅರಕು ಕಣಿವೆಯಲ್ಲಿರುವ ಬುಡಕಟ್ಟು ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದಲೇ ಈ ಕಾಫಿ ಬ್ಲೆಂಡ್ನ್ನು ತಯಾರಿಸಲಾಗಿದೆ. ನಾಂದಿ ಫೌಂಡೇಶನ್ನ ಉಸ್ತುವಾರಿಯಲ್ಲಿ ಆನಂದ್ ಮಹೀಂದ್ರ ಮತ್ತು ಅವರ ಕಂಪನಿಯ ಸಹಾಯದಿಂದ ಈ ಕಾಫಿ ಬ್ಲೆಂಡ್ ಇದು ವಿದೇಶದಲ್ಲಿ ಸದ್ದು ಮಾಡಿದೆ. ಸದ್ಯಕ್ಕೆ ಈ ಬ್ಲೆಂಡ್ ಭಾರತದಲ್ಲಿ ಸಿಗುತ್ತಿಲ್ಲ, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಇದು ಹವಾ ಸೃಷ್ಟಿಸುವ ನಿರೀಕ್ಷೆ ಇದೆ.
’ಅರಕು’ ಕಾಫಿ ಬ್ಲೆಂಡ್ ಪ್ಯಾರೀಸ್ನಲ್ಲಿ ಅವಾರ್ಡ್ ಗೆದ್ದಿರುವುದು ಭಾರತದ ಪಾಲಿಗೆ ಮಹತ್ವದ ಮೈಲಿಗಲ್ಲು ಎಂದು ಆನಂದ್ ಮಹೀಂದ್ರ ಟ್ವಿಟರ್ನಲ್ಲಿ ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.