ನವದೆಹಲಿ: ಗಂಗಾ ನದಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ 40 ಸ್ವಯಂಸೇವಕರ ತಂಡ ‘ಮಿಶನ್ ಗಂಗೆ’ ರಾಪ್ಟಿಂಗ್ ಯಾತ್ರೆಯನ್ನು ಹಮ್ಮಿಕೊಂಡಿದೆ.
ಪರ್ವತಾರೋಹಿ ಬಚೇಂದ್ರಿ ಪಾಲ್ ನೇತೃತ್ವದಲ್ಲಿ ಈ ತಂಡ ಒಂದು ತಿಂಗಳ ಕಾಲ, ನದಿಯ ಮೂಲಕ ಹರಿದ್ವಾರದಿಂದ ಪಾಟ್ನಾಗೆ, ಬಿಜ್ನೋರ್, ನರೋರ, ಫರುಖಬಾದ್, ಕಾನ್ಪುರ, ಅಲಹಾಬಾದ್, ವಾರಣಾಸಿ, ಬಕ್ಸರ್ ಮೂಲಕ ರಾಫ್ಟಿಂಗ್ ಯಾತ್ರೆ ನಡೆಸಲಿದೆ. ಈ ತಂಡದಲ್ಲಿ ಬಚೇಂದ್ರಿ ಪಾಳ್ ಸೇರಿದಂತೆ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಹತ್ತಿರುವ ಅನೇಕ ಮಂದಿ ಪರ್ವತಾರೋಹಿಗಳಿದ್ದಾರೆ.
ಪ್ರತಿ 9 ನಗರಗಳಲ್ಲೂ ಈ ತಂಡ ಗಂಗಾ ಶುದ್ಧೀಕರಣದ ಬಗ್ಗೆ, ಅಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದೆ.
ಗುರುವಾರ ಈ 40 ಮಂದಿಯ ತಂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದೆ. ತಂಡದ ಪ್ರಯತ್ನವನ್ನು ಮೋದಿ ಶ್ಲಾಘಿಸಿದ್ದಾರೆ.
ಕೇಂದ್ರ ಸರ್ಕಾರ ‘ನಮಾಮಿ ಗಂಗೆ’ ಯೋಜನೆಯಿಂದ ಪ್ರೇರಣೆಗೊಂಡು ಈ ತಂಡ ತಮ್ಮ ಯಾತ್ರೆಗೆ ’ಮಿಶನ್ ಗಂಗೆ’ ಹೆಸರನ್ನಿಟ್ಟಿದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.