ನವದೆಹಲಿ: ನಾವು ಬದಲಾವಣೆಯ ಸುವ್ಯವಸ್ಥೆಯಲ್ಲಿದ್ದೇವೆ, ನಾವು ಇಂದು ತೆಗೆದುಕೊಳ್ಳುವ ಕ್ರಮಗಳು ಭವಿಷ್ಯದಲ್ಲೂ ಮಾನವ ನಾಗರಿಕತೆಯ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ವಸಂಸ್ಥೆಯಿಂದ ‘ಚಾಂಪಿಯನ್ ಆಫ್ ದಿ ಅರ್ಥ್’ ಎಂದು ಪುರಸ್ಕೃತರಾಗಿರುವ ಪ್ರಧಾನಿ ನರೇಂದ್ರ ಮೋದಿ ಬರವಣಿಗೆ ಮೂಲಕ ಹೇಳಿದ್ದಾರೆ.
ನಿನ್ನೆ, ವಿಶ್ವಸಂಸ್ಥೆ ನನಗೆ ‘ಚಾಂಪಿಯನ್ ಆಫ್ ದಿ ಅರ್ಥ್’ ಅವಾರ್ಡ್ ನೀಡಿ ಗೌರವಿಸಿತು, ಅತ್ಯಂತ ವಿನಮ್ರತೆಯಿಂದ ಈ ಅವಾರ್ಡ್ ಸ್ವೀಕರಿಸಿದ್ದೇನೆ. ಆದರೆ ಈ ಅವಾಡ್ ವ್ಯಕ್ತಿಗೆ ಸಿಕ್ಕ ಗೌರವ ಎಂದು ನಾನು ಅಂದುಕೊಳ್ಳುವುದಿಲ್ಲ. ಬದಲಾಗಿ, ಪ್ರಕೃತಿ ಮಾತೆಯೊಂದಿಗೆ ಬಾಂಧವ್ಯ ಬೆಸೆಯುವುದನ್ನು ಪ್ರತಿಪಾದಿಸುವ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಸಿಕ್ಕ ಮನ್ನಣೆ.
ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ಭಾರತ ನೀಡುತ್ತಿರುವ ಕೊಡುಗೆಗಳಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೋ ಗುಟೆರಸ್ ಮನ್ನಣೆ, ಶ್ಲಾಘನೆ ನೀಡಿರುವುದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ.
ಮಾನವ ಮತ್ತು ಪ್ರಕೃತಿ ವಿಶೇಷವಾದ ಸಂಬಂಧವನ್ನು ಹೊಂದಿದ್ದಾರೆ. ತಾಯಿ ಪ್ರಕೃತಿ ನಮ್ಮನ್ನು ಪಾಲನೆ ಪೋಷಣೆ ಮಾಡುತ್ತಾಳೆ. ನದಿ ತಟದಲ್ಲಿ ಮೊದಲು ನಾಗರಿಕತೆಗಳು ಉಗಮಗೊಂಡಿತು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಮಾಜ ಏಳಿಗೆ, ಸಮೃದ್ಧಿಯನ್ನು ಕಾಣುತ್ತದೆ.
ಇಂದು, ಮಾನವ ಸಮಾಜ ಅತಿ ಪ್ರಮುಖವಾದ ಕವಲುದಾರಿಯಲ್ಲಿ ನಿಂತಿದೆ, ಇಲ್ಲಿ ನಾವು ಆಯ್ದುಕೊಳ್ಳುವ ದಾರಿ ನಮ್ಮ ಒಳಿತು ಮಾತ್ರವಲ್ಲ, ಮುಂಬರುವ ಪೀಳಿಗೆಯ ಒಳಿತನ್ನು ನಿರ್ಧರಿಸುತ್ತದೆ.
ನಮ್ಮ ಅತಿಯಾಸೆ ಮತ್ತು ಅಗತ್ಯತೆಗಳ ನಡುವಣ ಅಸಮತೋಲ ಪರಿಸರ ಅಸಮತೋಲನಕ್ಕೆ ನಾಂದಿ ಹಾಡಿದೆ. ಇದನ್ನು ಒಪ್ಪದೆ ನಾವು ಎಂದಿನಂತೆ ಮುಂದುವರೆಯುತ್ತಿದ್ದೇವೆ, ಆದರೆ ಈಗಲೇ ಸರಿಯಾದ ಕ್ರಮ ತೆಗೆದುಕೊಳ್ಳುವ ಅನಿವಾರ್ಯ ಇಲ್ಲಿ ಇದೆ.
ನಮ್ಮ ವೇದ ಉಪನಿಷದ್ಗಳಲ್ಲಿನ ಪ್ರಕೃತಿಯ ಪ್ರಾಮುಖ್ಯತೆಯನ್ನು ನಾವು ಮನಗಂಡು ಪಾಲನೆ ಮಾಡಬೇಕು, ಸ್ವಚ್ಛ ಭಾರತದಂತಹ ಅಭಿಯಾನ ಭವಿಷ್ಯದ ಸುಸ್ಥಿರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಜನರ ಆಶೀರ್ವಾದದೊಂದಿಗೆ 400 ಮಿಲಿಯನ್ ಭಾರತೀಯರು ಬಯಲುಶೌಚದಿಂದ ಇಂದು ದೂರವಾಗಿದ್ದಾರೆ, ನೈರ್ಮಲ್ಯ ಒಳಗೊಳ್ಳುವಿಕೆ ಶೇ.35ರಿಂದ ಶೇ.95ಕ್ಕೆ ಏರಿಕೆಯಾಗಿದೆ ಎಂದರು.
source: Hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.