ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರು ಹೋಗಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ಕೇರಳದಾದ್ಯಂತ ಸಾವಿರಾರು ಜನರು ಬೀದಗಿಳಿದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಪಾರ ಸಂಖ್ಯೆಯ ಮಹಿಳೆಯರೂ ಇದರಲ್ಲಿ ಭಾಗಿಯಾಗಿರುವುದು ವಿಶೇಷ.
‘ಅಯ್ಯಪ್ಪ ಧರ್ಮ’ವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರೆಸಲಿದ್ದೇವೆ, ಶಬರಿಮಲೆಯ ಪ್ರಾಚೀನ ಪರಂಪರೆಯನ್ನು ನಾಶಮಾಡಲು ಹೊರಟಿರುವ ವ್ಯವಸ್ಥೆ ಮತ್ತು ಕಾನೂನಿನ ವಿರುದ್ಧ ಸಮರ ನಿರಂತರ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಶಬರಿಮಲೆ ರಕ್ಷಣಾ ಮಂಡಳಿ ಹೆಸರಿನ ಬ್ಯಾನರ್ ಹಿಡಿದ ನೂರಾರು ಮಂದಿ ಕೊಚ್ಚಿ ಮತ್ತು ತಿರುವನಂಪತಪುರಂನಲ್ಲಿ ರಸ್ತೆ ತಡೆ ಮಾಡಿದರು. ಇದರಿಂದ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಪಂದಳಂ ಅರಮನೆ ಸಮೀಪದಿಂದ ನೂರಾರು ಅಯ್ಯಪ್ಪ ಭಕ್ತರು ‘ನಾಮಜಪ ಪಾದಾಯಾತ್ರೆ’ಯನ್ನು ನಡೆಸಿದರು. ಪಂದಳಂ ರಾಜಮನೆತನ ಇವರಿಗೆ ಬೆಂಬಲ ನೀಡಿದ್ದು, ಶೀಘ್ರದಲ್ಲೇ ಸುಪ್ರೀಂನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ ಎಂದಿದೆ.
ಅ.8ರಂದು ಬಿಜೆಪಿ ಮತ್ತು ಸಂಘ ಪರಿವಾರದವರು ಸಭೆ ಕರೆದಿದ್ದು, ಶಬರಿಮಲೆ ಪರಂಪರೆ ರಕ್ಷಣೆಗೆ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.
source: dailyhunt
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.