ರಾಯಚೂರು: ಗಾಂಧಿ ಜಯಂತಿಯ ಪ್ರಯುಕ್ತ ರೈಲ್ವೇ ಆರಂಭಿಸಿದ ಸ್ವಚ್ಛ ರೈಲು ಅಭಿಯಾನದಿಂದಾಗಿ ರಾಯಚೂರು ಜಿಲ್ಲೆಯ ರೈಲ್ವೇ ನಿಲ್ದಾಣದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕಸದ ತೊಟ್ಟಿಯಂತಿದ್ದ ಈ ನಿಲ್ದಾಣ ಇಂದು ಸ್ವಚ್ಛವೂ, ಸುಂದರವೂ ಆಗಿ ಗಮನ ಸೆಳೆಯುತ್ತಿದೆ.
ಈ ಹಿಂದೆ ಸ್ವಚ್ಛತಾ ಸಮೀಕ್ಷೆಯಲ್ಲಿ ಅತ್ಯಂತ ಕಳಪೆ ಸಾಧನೆಯನ್ನು ಮಾಡಿದ್ದ ರಾಯಚೂರು ರೈಲ್ವೇ ನಿಲ್ದಾಣ ಎಲ್ಲರ ನಿಂದನೆಗೆ ಗುರಿಯಾಗಿತ್ತು. ಆದರೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರ ಆದೇಶದಂತೆ ದಕ್ಷಿಣ ಮಧ್ಯೆ ರೈಲ್ವೇ ನಿಲ್ದಾಣಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಿದ ಕಾರಣದಿಂದಾಗಿ ಇಂದು ದೇಶದ ನೂರು ಸ್ವಚ್ಛ ನಿಲ್ದಾಣಗಳ ಪೈಕಿ ಸ್ಥಾನವನ್ನು ಪಡೆದುಕೊಂಡಿದೆ.
ಅಷ್ಟೇ ಅಲ್ಲ ಈ ರೈಲು ನಿಲ್ದಾಣ ಈಗ ಸಂಪೂರ್ಣ ಗಾಂಧೀಮಯಗೊಂಡಿದೆ. ಸ್ವಾತಂತ್ರ್ಯ ಚಳುವಳಿ ವೇಳೆ ಗಾಂಧೀಜಿಯವರು ರಾಯಚೂರಿನಿಂದ ಮಹಾರಾಷ್ಟ್ರಕ್ಕೆ ತೆರಳಿದ ವಿಷಯವನ್ನು ಇಟ್ಟುಕೊಂಡು ರೈಲು ನಿಲ್ದಾಣದಲ್ಲಿ ಸುಂದರ ಚಿತ್ರಗಳನ್ನು ಬಿಡಿಸಲಾಗಿದೆ. ಉಪ್ಪಿನ ಸತ್ಯಾಗ್ರಹ ಸೇರಿದಂತೆ ಗಾಂಧಿಯವರ ಇತರ ಹೋರಾಟಗಳೂ ಇಲ್ಲಿ ಚಿತ್ರ ರೂಪವನ್ನು ಪಡೆದುಕೊಂಡಿವೆ.
ಇನ್ನು ಗಾಂಧೀಜಿಯವರ 150ನೇ ಜನ್ಮದಿನದ ಪ್ರಯುಕ್ತ ರೈಲ್ವೇ ನಿಲ್ದಾಣದ ಎದುರುಗಡೆ ಪುತ್ಥಳಿಯನ್ನೂ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಒಟ್ಟಿನಲ್ಲಿ ಒಂದು ಕಾಲದಲ್ಲಿ ಸ್ವಚ್ಛತೆಯನ್ನೇ ಕಾಣದ ರೈಲು ನಿಲ್ದಾಣವೊಂದು ಸ್ವಚ್ಛ ಭಾರತ ಅಭಿಯಾನದ ಕಾರಣದಿಂದಾಗಿ ಇಂದು ಸುಂದರವಾಗಿ ಕಂಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.