ನವದೆಹಲಿ: ಖ್ಯಾತ ಜೈನಮುನಿ ತರುಣ್ ಸಾಗರ್ ಅವರು ಶನಿವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. 51 ವರ್ಷದ ಅವರು, ಜಾಂಡೀಸ್ ಸೇರಿದಂತೆ ಹಲವು ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಪೂರ್ವ ದೆಹಲಿಯ ಕೃಷ್ಣ ನಗರ್ ಪ್ರದೇಶದ ರಾಧಾಪುರಿ ಜೈನ ದೇಗುಲದಲ್ಲಿ ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ಉತ್ತರಪ್ರದೇಶದ ಮುರಾದ್ನಗರದ ತರುಣ್ಸಾಗರಮ್ನಲ್ಲಿ ಇಂದು ಅಂತ್ಯಕ್ರಿಯೆ ಜರುಗಲಿದೆ.
1967ರ ಜೂನ್ 26ರಂದು ಮಧ್ಯಪ್ರದೇಶದ ದಹೋಹ್ ಜಿಲ್ಲೆಯಲ್ಲಿ ಪವಣ್ ಕುಮಾರ್ ಜೈನ್ ಆಗಿ ಜನಿಸಿದ ಅವರು, 1981ರಲ್ಲಿ ಮನೆ ತೊರೆದು ದಿಗಂಬರತ್ವ ಸ್ವೀಕರಿಸಿಕೊಂಡು ತರುಣ್ ಸಾಗರ್ ಆದರು. ದೇಶವ್ಯಾಪಿ ಸಂಚರಿಸಿ ಕ್ರಾಂತಿಕಾರಿ ಬೋಧನೆಗಳನ್ನು ಮಾಡುತ್ತಿದ್ದ ಇವರಿಗೆ ಅಪಾರ ಪ್ರಮಾಣದ ಬೆಂಬಲಿಗರಿದ್ದಾರೆ.
ಜಾಂಡೀಸ್ಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಹಲವು ದಿನಗಳ ಹಿಂದೆ ಔಷಧಿ ಸ್ವೀಕರಿಸುವುದನ್ನು ನಿಲ್ಲಿಸಿದ್ದರು. ಆಹಾರ ಸೇವನೆಯನ್ನೂ ಸ್ಥಗಿತಗೊಳಿಸಿದರು. ಹೀಗಾಗಿ ಅವರನ್ನು ರಾಧಾಪುರಿಗೆ ಕರೆದುಕೊಂಡು ಬರಲಾಗಿತ್ತು, ಅಲ್ಲಿ ಅವರು ಜೈನ ಪದ್ಧತಿಯಂತೆ ‘ಸಂತರ’ವನ್ನು ಪಡೆದುಕೊಂಡರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.