ನವದೆಹಲಿ: ನಿವೃತ್ತ ಬದುಕನ್ನು ಸುಂದರವಾಗಿ, ಉಪಯುಕ್ತವಾಗಿ ಕಳೆಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮುಂಬಯಿ ಮೂಲದ ಅನು ಟಂಡನ್ ವಿಹೀರ. ಭೂಮಿಯನ್ನು ಸಂರಕ್ಷಿಸಲು ಅತ್ಯವಶ್ಯಕವಾಗಿ ಪ್ರತಿಯೊಬ್ಬರು ಮಾಡಲೇಬೇಕಾದ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ತ್ಯಾಜ್ಯ ವಸ್ತುಗಳು ಕೊಳಚೆ ಸೇರುವುದನ್ನು ತಪ್ಪಿಸಿ ಅವುಗಳನ್ನು ಕಲಾತ್ಮಕ ಕಾರ್ಯಕ್ಕೆ ಬಳಕೆ ಮಾಡಿದ್ದಾರೆ.
ಕಲಾವಿದರ ಸಹಕಾರದೊಂದಿಗೆ ಅವರು ಹಲವು ತ್ಯಾಜ್ಯ ವಸ್ತುಗಳನ್ನು ಅಲಂಕಾರಿಕ ವಸ್ತುಗಳಾಗಿ ಪರಿವರ್ತನೆ ಮಾಡಿದ್ದಾರೆ. ಇದರಿಂದ ಅವರ ಮನೆಗಳು ಕಂಗೊಳಿಸುತ್ತಿವೆ. ಮಾತ್ರವಲ್ಲ, ಕಡಿಮೆ ಬೆಲೆಗೆ ಇತರರಿಗೂ ಇವುಗಳನ್ನು ಮಾರಾಟ ಮಾಡುತ್ತಾರೆ. ಇದಕ್ಕಾಗಿ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ.
ಹಳೆ ಬಟ್ಟೆ, ಪ್ಲಾಸ್ಟಿಕ್, ವಾರ್ಕ್ಶಾಪ್ಗಳ ಮತ್ತು ಫ್ಯಾಕ್ಟರಿಗಳ ವೇಸ್ಟ್ ಆದ ಟೈಯರ್, ಇತ್ಯಾದಿ ಹತ್ತು ಹಲವು ತ್ಯಾಜ್ಯ ಪರಿಕರಗಳನ್ನು ಬಳಸಿ ಅವರು ಅದ್ಭುತವಾದ ಕುರ್ಚಿ, ಮೇಜು, ಇತ್ಯಾದಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ರೂ.6 ಸಾವಿರದಿಂದ ರೂ.12 ಸಾವಿರದವರೆಗೆ ಫರ್ನಿಚರ್ಗಳನ್ನು ಅವರು ಮಾರಾಟ ಮಾಡುತ್ತಾರೆ.
ಜನರಿಗೆ ಮರುಬಳಕೆಯ ಅಗತ್ಯತೆಯ ಬಗ್ಗೆ ಅರ್ಥ ಮಾಡಿಸಬೇಕು, ತ್ಯಾಜ್ಯಗಳಿಂದ ತಯಾರು ಮಾಡಿರುವ ವಸ್ತುಗಳ ಬಗ್ಗೆ ಅರಿವು ಮೂಡಿಸಬೇಕು ಎಂಬುದು ನನ್ನ ಆಶಯ ಎಂದು ಟಂಡನ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.