ಅಹ್ಮದಾಬಾದ್: ದೇವಸ್ಥಾನಕ್ಕೆ ಆಗಮಿಸುವ ಭಕ್ತರು ದೇವರಿಗೆ ಸಮರ್ಪಣೆ ಮಾಡುವ ಹೂ, ಎಲೆ, ಇತರ ಸಾವಯವ ವಸ್ತುಗಳು ಕೊನೆಗೆ ಸೇರುವುದು ಕಸದ ತೊಟ್ಟಿಯನ್ನೇ. ಪವಿತ್ರ ಎಂದು ಪರಿಗಣಿತವಾದ ಈ ವಸ್ತುಗಳು ಬಳಕೆಯಾದ ಬಳಿಕ ಮಾನವ ಕಾಲಿನಡಿಯ ಕಸವಾಗುತ್ತವೆ. ಆದರೆ ಈ ಪವಿತ್ರ ಕಸಗಳನ್ನು ಅತ್ಯದ್ಭುತ ರಸವನ್ನಾಗಿಸುವ ನಿಟ್ಟಿನಲ್ಲಿ ಅಹ್ಮದಾಬಾದ್ನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ದೇಗುಲದಲ್ಲಿ ಸೃಷ್ಟಿಯಾಗುವ ಕಸಗಳನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಯಂತ್ರವನ್ನು ಯಶ್ ಭಟ್ ಮತ್ತು ಅರ್ಜುನ್ ಠಾಕೂರ್ ಅಭಿವೃದ್ಧಿಪಡಿಸಿದ್ದಾರೆ. ಪ್ರಾಯೋಗಿಕವಾಗಿ ದೇಗುಲಗಳಿಂದ 300 ಕೆಜಿ ಕಸಗಳನ್ನು ಸಂಗ್ರಹಿಸಿ ಅದನ್ನು ಗೊಬ್ಬರವನ್ನಾಗಿ ಇವರು ಪರಿವರ್ತಿಸಿದ್ದಾರೆ.
ದೇವರಿಗೆ ನೀಡುವ ಹೂ, ಹಣ್ಣು, ತೆಂಗಿನ ಕಾಯಿ ಇತ್ಯಾದಿಗಳ ಬಗ್ಗೆ ಭಕ್ತರಿಗೆ ಭಾವನಾತ್ಮಕತೆ ಇರುತ್ತದೆ. ಹೀಗಾಗಿ ಇವುಗಳನ್ನು ಕೊಳಚೆಗೆ ಎಸೆಯುವ ಬದಲು ಸಾವಯವ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ಗಿಡ, ಮರಗಳಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.
ತಮ್ಮ ಯಂತ್ರವನ್ನು ಬಳಸಿ ಅಹ್ಮದಾಬಾದ್ ಮಹಾನಗರ ಪಾಲಿಕೆ ದೇಗುಲಗಳ ಕಸವನ್ನು ಗೊಬ್ಬರವನ್ನಾಗಿಸುವ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬುದು ಇವರ ಒತ್ತಾಸೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.