ಅಮೇಥಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರತಿನಿಧಿಸುತ್ತಿರುವ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಪಿಂಡರ ಠಾಕೂರ್ ಗ್ರಾಮ ಸಂಪೂರ್ಣ ಡಿಜಿಟಲೀಕರಣಗೊಂಡಿವೆ. ಆದರೆ ಇದರ ಶ್ರೇಯಸ್ಸು ಸಲ್ಲಬೇಕಾಗಿರುವುದು ರಾಹುಲ್ಗೆ ಅಲ್ಲ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ.
ಹೌದು, ಸ್ಮೃತಿ ಇರಾನಿಯವರ ಪ್ರಯತ್ನದ ಫಲವಾಗಿ ಪಿಂಡರ ಠಾಕೂರ್ ಗ್ರಾಮದಲ್ಲಿ, 206 ಸರ್ಕಾರಿ ಸೇವೆಗಳು ಡಿಜಟಲೀಕರಣಗೊಂಡಿವೆ. ಇಲ್ಲಿನ ಜನರನ್ನು ಎರಡು ವೈಫೈ ಚೌಪಲ್ಗಳಿಗೆ ಸಂಪರ್ಕಿತಗೊಳಿಸಲಾಗಿದೆ. 15 ದಿನಗಳವರೆಗೆ ದಿನಕ್ಕೆ 2 ಜಿಬಿ ಡಾಟಾ ಇವರಿಗೆ ಉಚಿತ ಸಿಗಲಿದೆ. ಬಳಿಕ ಅತ್ಯಂತ ಕಡಿಮೆ ಬೆಲೆಗೆ ಇವರಿಗೆ ಇಂಟರ್ನೆಟ್ ಸೇವೆ ಲಭಿಸಲಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಗ್ರಾಮವನ್ನು ಡಿಜಿಟಲೀಕರಣಗೊಳಿಸಲಾಗಿದೆ.
ರಾಹುಲ್ ಅವರ ಬದ್ಧ ಪ್ರತಿಸ್ಪರ್ಧಿ ಎಂದೇ ಕರೆಯಲ್ಪಡುವ ಸ್ಮೃತಿ ಅವರು, ಸೆ.1ರಂದು ಅಧಿಕೃತ ಕಾರ್ಯಕ್ರಮದಲ್ಲಿ ಈ ಗ್ರಾಮದ ಡಿಜಿಟಲ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.