ನವದೆಹಲಿ: ಕೇವಲ ಕೇರಳ, ಕರ್ನಾಟಕ ಮಾತ್ರವಲ್ಲ, ಈ ಬಾರಿಯ ಮಳೆ ದೇಶದ ನಾನಾ ರಾಜ್ಯಗಳಲ್ಲಿ ಆವಾಂತರ ಸೃಷ್ಟಿ ಮಾಡಿದೆ. ಈ ವರ್ಷ ಮಳೆಯಿಂದಾಗಿ ಸುಮಾರು 1074 ಜನರು ಮೃತರಾಗಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಆ.26ರವರೆಗೆ ದೇಶದಲ್ಲಿ ಮಳೆಯಿಂದ 1074 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಕೇರಳವೊಂದರಲ್ಲೇ 443 ಸಾವುಗಳು ಸಂಭವಿಸಿವೆ. 166 ಮಂದಿ ಕರ್ನಾಟಕದಲ್ಲಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ 218 ಮಂದಿ, ಪಶ್ಚಿಮಬಂಗಾಳದಲ್ಲಿ 198 ಮಂದಿ ಮತ್ತು ಅಸ್ಸಾಂನಲ್ಲಿ 49 ಮಂದಿ ಮೃತಪಟ್ಟಿದ್ದಾರೆ.
ದೇಶದ ಸುಮಾರು 17,14,863 ಜನರು ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.