ನಾವು ಮಾಡಿದ ಉತ್ತಮ ಕರ್ಮಗಳು ನಮ್ಮನ್ನು ಎಂದಿಗೂ ಕೈಬಿಡೋದಿಲ್ಲ ಎಂಬ ಮಾತು 12 ವರ್ಷದ ಬಾಲಕಿ ಅಕ್ಷಯಾಳ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ. ತಮಿಳುನಾಡು ಮೂಲದ ಈಕೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಗೆ ಸರ್ಜರಿಯಾಗಬೇಕಾಗಿದ್ದು, ಅದಕ್ಕಾಗಿ ಸಾಕಷ್ಟು ಹಣದ ಅಗತ್ಯವಿದೆ.
ಆದರೂ ಎದೆಗುಂದದ ಅಕ್ಷಯಾ ಜನರಿಂದ ತನ್ನ ಸರ್ಜರಿಗಾಗಿ ಹಣ ಸಂಗ್ರಹ ಮಾಡುತ್ತಿದ್ದಾಳೆ. ಹೃದಯದಲ್ಲಿ ಸಮಸ್ಯೆಯಿದ್ದರೂ ಆಕೆಯದ್ದು ವಿಶಾಲ ಹೃದಯ, ಸಂಗ್ರಹಿಸಿದ ರೂ. 20 ಸಾವಿರದಲ್ಲಿ ಆಕೆ ರೂ.5 ಸಾವಿರವನ್ನು ಕೇರಳದ ನೆರೆ ಸಂತ್ರಸ್ಥರಿಗಾಗಿ ನೀಡಿದ್ದಾಳೆ. ಕಷ್ಟದಲ್ಲೂ ನೆರವಾದ ಆಕೆಯ ಗುಣ ಎಲ್ಲರ ಮನಸ್ಸನ್ನು ತಟ್ಟಿದೆ.
ಆಕೆಯ ಈ ಅಸಾಧಾರಣ ಕಾರ್ಯವನ್ನು ತಿಳಿದುಕೊಂಡ ತಿರುವನಂಪತಪುರಂನ ಶ್ರೀ ಚಿತ್ರಾ ತಿರುನಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ ಆಂಡ್ ಟೆಕ್ನಾಲಜಿ ಆಕೆಗೆ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದೆ. ಅದಕ್ಕೆ ತಗಲುವ ರೂ.2.5 ಲಕ್ಷ ವೆಚ್ಚವನ್ನು ಆಸ್ಪತ್ರೆಯೇ ಭರಿಸಲಿದೆ.
ಕಷ್ಟದಲ್ಲೂ ಆಕೆ ಉಪಕಾರ ಮಾಡಿದ್ದಾಳೆ, ಆಕೆಯ ಉಪಕಾರ ಇನ್ನೊಂದು ರೂಪದಲ್ಲಿ ಆಕೆಯ ಕೈಹಿಡಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.