ಮುಂಬಯಿ: ಧರ್ಮ ಎಂದರೆ ಕೇವಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸುವುದು ಮಾತ್ರವಲ್ಲ, ಅದು ಸಾಮಾಜಿಕ ಕರ್ತವ್ಯವೂ ಆಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮುಂಬಯಿಯಲ್ಲಿ ನಡೆದ ಆರ್ಎಸ್ಎಸ್ ನಾಯಕ ನಾನಾ ಪಾಲ್ಕರ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಉದ್ಯಮಿ ರತನ್ ಟಾಟಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
‘ಧರ್ಮ’ ಪರಿಕಲ್ಪನೆಯನ್ನು ವಿಸ್ತೃತವಾಗಿ ವಿವರಿಸಿದ ಭಾಗವತ್ ಅವರು, ‘ಆಚರಣೆಗಳನ್ನು ಮಾಡುವುದು ಮಾತ್ರ ಧರ್ಮವಲ್ಲ, ಒಗ್ಗಟ್ಟಿಗಾಗಿ ಮತ್ತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುವುದು ಧರ್ಮ. ಇದು ಸಮಾಜದೆಡೆಗಿನ ನಮ್ಮ ಕರ್ತವ್ಯ’ ಎಂದರು.
‘ಧರ್ಮ ಎಂದರೆ ತಂದೆಯೆಡೆಗೆ ಮಗನಿಗಿರುವ ಕರ್ತವ್ಯ, ಮಗನೆಡೆಗೆ ತಂದೆಗಿರುವ ಕರ್ತವ್ಯ, ಅಧಿಕಾರದಲ್ಲಿರುವವರು ರಾಜಧರ್ಮ ಪಾಲನೆ ಮಾಡಬೇಕು, ಯಾವುದೇ ಫಲಾಪೇಕ್ಷೆ ಇಲ್ಲದೆ ನಾವು ನಮ್ಮ ಕರ್ತವ್ಯ ಮಾಡಬೇಕು’ ಎಂದರು.
ಸಂಘ ‘ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ’ ಮತ್ತು ಒಗ್ಗಟ್ಟಿನ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ನಂಬಿಕೆ ಇರಿಸಿದೆ, ಪಾಲ್ಕರ್ ಅವರು ಪ್ರಮಾಣಿಕ ಇಚ್ಛಾಶಕ್ತಿಯ ಮೂಲಕ ಸಮಾಜಸೇವೆ ಮಾಡಿದರು, ಒಳ್ಳೆಯದನ್ನು ಮಾಡಲು ಕರೆ ನೀಡಿದರು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.