ಲಕ್ನೋ: ದೇಶದಾದ್ಯಂತ ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಪ್ರಾಣಿಗಳನ್ನು ಅದರಲ್ಲೂ ಕುರಿ, ಆಡುಗಳನ್ನು ಬಲಿಕೊಡುವುದು ಈ ಹಬ್ಬದ ಪ್ರಮುಖ ಆಚರಣೆಯಾಗಿದೆ.
ಆದರೆ ಲಕ್ನೋದ ಒಂದಿಷ್ಟು ಮಂದಿ ಬಕ್ರೀದ್ ಹಬ್ಬಕ್ಕೆ ಕುರಿ ಅಥವಾ ಆಡನ್ನು ಬಲಿಕೊಡದಿರಲು ನಿರ್ಧರಿಸಿದ್ದಾರೆ. ಅದರ ಬದಲು ಅವರು ಕೇಕ್ನಲ್ಲಿ ಆಡನ್ನು ಚಿತ್ರಿಸಿ ಅದನ್ನು ಕಟ್ ಮಾಡಲು ನಿರ್ಧರಿಸಿದ್ದಾರೆ.
ಲಕ್ನೋದ ಬೇಕರಿಯೊಂದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ, ಪೇಟಾ ಸ್ನೇಹಿ ಬಕ್ರೀದ್ನ್ನು ಇದು ಆಚರಿಸುತ್ತಿದೆ. 2016ರಲ್ಲೂ ಕೆಲವರು ಆಡಿನ ಬದಲಿಗೆ ಕೇಕ್ ಕಟ್ ಮಾಡಿ ಬಕ್ರೀದ್ ಆಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.