ನವದೆಹಲಿ: ಭೀಕರ ಮಳೆಗೆ ಕೇರಳಕ್ಕೆ ಕೇರಳವೇ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ದೇವರಂತೆ ಜನರ ನೆರವಿಗೆ ಆಗಮಿಸಿದವರು ನಮ್ಮ ಯೋಧರು. ಅಪಾಯದಲ್ಲಿ ಸಿಲುಕಿದ್ದ ಹಲವರನ್ನು ಏರ್ಲಿಫ್ಟ್ ಮಾಡುವ ಮೂಲಕ ಪ್ರಾಣ ಕಾಪಾಡಿದ್ದಾರೆ.
ತುಂಬು ಗರ್ಭೀಣಿಯೊಬ್ಬಳ ಪ್ರಾಣವನ್ನು ರಕ್ಷಣೆ ಮಾಡಿದ ಯೋಧರಿಗೆ ಆಕೆಯ ಮನೆಯವರು ಅಪೂರ್ವವಾದ ರೀತಿಯಲ್ಲಿ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ಮನೆಯ ರೂಫ್ನಲ್ಲಿ ಏರ್ಲಿಫ್ಟ್ ಮಾಡಿದ ಜಾಗದಲ್ಲಿ ‘ಥ್ಯಾಂಕ್ಸ್ ‘ ಎಂದು ಅವರು ಪೆಯಿಂಟ್ ಮಾಡಿದ್ದಾರೆ.
ಕೇಡರ್ ವಿಜಯ್ ವರ್ಮಾ ಅವರ ನೇತೃತ್ವದಲ್ಲಿ ನೌಕೆಯ ಎಎಲ್ಎಚ್ ಹೆಲಿಕಾಫ್ಟರ್ ಎರ್ನಾಕುಲಂ ಜಿಲ್ಲೆಯ ಅಲುವಾ ಪ್ರದೇಶದ ಸಂಪೂರ್ಣ ಜಲಾವೃತವಾಗಿದ್ದ ಮನೆಯ ರೂಫ್ನಿಂದ ತುಂಬು ಗರ್ಭಿಣಿ ಸಜಿತ ಜಬಿಲ್ರನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಿತ್ತು.
ಆಕೆಯನ್ನು ಏರ್ಲಿಫ್ಟ್ ಮಾಡುವುದಕ್ಕೂ ಮುನ್ನ ಯೋಧರು ವೈದ್ಯರನ್ನು ಕೆಳಗೆ ಕಳುಹಿಸಿ ಆಕೆಯ ಪರಿಸ್ಥಿತಿಯನ್ನು ಪರೀಕ್ಷೆ ನಡೆಸಿದ್ದರು, ಗರ್ಭದಲ್ಲಿ ನೀರು ಸೋರಿಕೆಯಾಗುತ್ತಿದ್ದ ಪರಿಣಾಮ ಆಕೆಯನ್ನು ಆಸ್ಪತ್ರೆಗೆ ಸಾಗಿಸುವುದು ಅತ್ಯಗತ್ಯವಾಗಿತ್ತು. ತಕ್ಷಣ ಆಕೆಯನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಕೆಲವೇ ನಿಮಿಷದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಅವರ ಮನೆಯ ರೂಫ್ ಮೇಲೆ ಸೇನೆಯನ್ನು ಉದ್ದೇಶಿಸಿ ಏರ್ಲಿಫ್ಟ್ ಮಾಡಿದ ಜಾಗದಲ್ಲಿ ‘ಥ್ಯಾಂಕ್ಸ್’ ಎಂದು ಬರೆಯಲಾಗಿದೆ. ಈ ಇಮೇಜ್ನ್ನು ನೌಕಾ ಸೇನೆ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
#OpMadad #KeralaFloodRelief #KeralaFloods2018 A Thank You note painted on the roof of a house where the Naval ALH piloted by Cdr Vijay Varma rescued two women. Bravo… pic.twitter.com/xsaD1RfeIk
— SpokespersonNavy (@indiannavy) August 20, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.