ಹುಬ್ಬಳ್ಳಿ: ಸೂಕ್ತ ಪಶು ವೈದ್ಯಕೀಯ ನೆರವು ಸಿಗದ ಹಿನ್ನಲೆಯಲ್ಲಿ ದನ ಮತ್ತು ಕರುವನ್ನು ಕಳೆದುಕೊಂಡ ಬೆಳಗಾವಿಯ ಸೌದತ್ತಿ(ಸವದತ್ತಿ) ತಾಲೂಕಿನ ಮುರ್ಗೊಡ ಗ್ರಾಮದ ಯುವ ರೈತನೊಬ್ಬನ ಸಹಾಯಕ್ಕೆ ಪ್ರಧಾನಿ ಸಚಿವಾಲಯ ಆಗಮಿಸಿದೆ.
ರೈತ ರಾಹುಲ್ ಬೆಕನಾಳಕರ್ ಅವರು ಮೇ 29ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, 30 ಗ್ರಾಮವನ್ನೊಳಗೊಂಡ ತಮ್ಮ ಹೋಬಳಿಯಲ್ಲಿ ಪಶುವೈದ್ಯಕೀಯ ಕೇಂದ್ರವನ್ನು ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದರು. ತಮ್ಮ ತಂದೆಯ ಸಾವಿನ ಬಳಿಕ ತಮ್ಮ ಕುಟುಂಬ ಪಡುತ್ತಿರುವ ಯಾತನೆ, ಗೋವಿನ ಮರಣದಿಂದಾದ ನಷ್ಟ ಎಲ್ಲವನ್ನೂ ಅವರು ಉಲ್ಲೇಖಿಸಿದ್ದರು. ಅವರ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ಬಡ ರೈತನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಆ.6ರಂದು ಅವರ ಮನೆಗೆ ಪಶು ಸಂಗೋಪನಾ ಇಲಾಖೆಯವರು ಆಗಮಿಸಿ ರಾಹುಲ್ ಅವರಿಗೆ ದನ ಮತ್ತು ಕರುವಿನ ಸಾವಿನಿಂದ ಆದ ನಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಆಲಿಸಿದ್ದಾರೆ.
ಶೀಘ್ರದಲ್ಲೇ ಇವರ ಹೋಬಳಿಯಲ್ಲಿ ಪಶುಸಂಗೋಪಣಾ ಇಲಾಖೆಯನ್ನು ಸ್ಥಾಪಿಸುವ ಭರವಸೆಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.