ಭೋಪಾಲ್: ತಾನು ಆಗಮಿಸಿದ್ದ ಸಭೆಯಲ್ಲಿ ಆಸನದ ಅವ್ಯವಸ್ಥೆ, ಕಾರ್ಯಕರ್ತರ ತಳ್ಳಾಟ, ನೂಕಾಟ, ಅಶಿಸ್ತನ್ನು ಕಂಡ ಮಧ್ಯಪ್ರದೇಶದ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಾಬರಿಯಾ ಅವರು, ‘ಆರ್ಎಸ್ಎಸ್ ನೋಡಿ ಶಿಸ್ತು ಕಲಿಯಿರಿ’ ಎಂದು ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ವಿಧಿಶಾದಲ್ಲಿ ನಡೆದ ಕಾಂಗ್ರೆಸ್ ವ್ಯವಸ್ಥಾಪನಾ ಸಭೆಯಲ್ಲಿ ಈ ಸನ್ನಿವೇಶ ನಡೆದಿದೆ. ಕಾಂಗ್ರೆಸ್ ಮುಖಂಡರೊಬ್ಬರಿಗೆ ಆಸನದ ವ್ಯವಸ್ಥೆ ಮಾಡದೇ ಇದ್ದುದರಿಂದ ಕಾರ್ಯಕರ್ತರ ನಡುವೆ ಗುದ್ದಾಟ ಏರ್ಪಟ್ಟಿದೆ. ಈ ವೇಳೆ ಮಧ್ಯಪ್ರವೇಶಿಸಿದ ಬಾಬರಿಯಾ ಅವರು, ಆರ್ಎಸ್ಎಸ್ ಉದಾಹರಣೆಯನ್ನು ಕೊಟ್ಟು ಕಾರ್ಯಕರ್ತರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.
ಬಾಬರಿಯಾ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು, ಮಧ್ಯಪ್ರದೇಶದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. ಇವರು ತಮ್ಮ ಕಾರ್ಯಕರ್ತರಿಗೆ ‘ಆರ್ಎಸ್ಎಸ್ ನೋಡಿ ಶಿಸ್ತು ಕಲಿಯಿರಿ’ ಎಂದಿರುವುದು ಆ ಪಕ್ಷಕ್ಕೆ ತೀವ್ರವಾದ ಮುಜುಗರವನ್ನು ತಂದಿದೆ.
ತಮ್ಮ ಸಲಹೆಯನ್ನು ಸಮರ್ಥಿಸಿಕೊಂಡಿರುವ ಬಾಬರಿಯಾ, ‘ಒಳ್ಳೆತನವಿರುವ ಯಾವುದೇ ಸಂಘಟನೆಯನ್ನು ಹೊಗಳುವುದರಲ್ಲಿ ತಪ್ಪಿಲ್ಲ, ಚೀನಾ ಯುದ್ಧದ ವೇಳೆ ನೆಹರೂರವರು ಆರ್ಎಸ್ಎಸ್ನ್ನು ಬಳಸಿಕೊಂಡಿದ್ದರು, ಅದಕ್ಕೆ ಆ ಸಂಘಟನೆಯ ಶಿಸ್ತೇ ಕಾರಣವಾಗಿತ್ತು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.