ಮುಂಬೈ: ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ದುಖಃತಪ್ತ ತಂದೆಯೊಬ್ಬರು ಮುಂಬೈ ಮಹಾನಗರದ ರಸ್ತೆಗಳ ಗುಂಡಿಯನ್ನು ಕಳೆದ 3 ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ.
ದಾದಾರಾವ್ ಬಿಲ್ಹೊರೆ ಅವರ ಪ್ರೇರಣಾದಾಯಕ ಕಾರ್ಯ ಮಗನನ್ನು ಕಳೆದುಕೊಂಡ ದುರಂತದಿಂದ ಆರಂಭವಾದುದು ವಿಷಾದನೀಯ. ಆದರೆ ತನ್ನ ಮಗನಿಗಾದ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂಬ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಆದರ್ಶಮಯ, ಪ್ರೇರಣಾಶೀಲ ಎನಿಸಿಕೊಂಡಿದೆ.
ಬಿಲ್ಹೊರೆ ಅವರ ಮಗ ಪ್ರಕಾಶ 2015ರ ಜೂನ್ 28ರಂದು ರಸ್ತೆಯಲ್ಲಿನ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ ಮೃತರಾಗಿದ್ದರು. ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಅವರ ಸಾವಿಗೆ ಕಾರಣವಾಗಿತ್ತು. ಆದರೂ ಪಾಲಿಕೆಯ ನಿರ್ಲಕ್ಷ್ಯವನ್ನು ಟೀಕಿಸದ ಬಿಲ್ಹೊರೆ ಸ್ವತಃ ತಾವೇ ಮುಂದಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ನಿರತರಾದರು.
ಒಬ್ಬರೇ ಒಂದೊಂದೇ ಗುಂಡಿಗಳನ್ನು ಮುಚ್ಚಲು ಅವರು ಆರಂಭಿಸಿದರು. ಅವರ ಕಾರ್ಯವನ್ನು ನೋಡಿದ ಹಲವರು ಅವರೊಂದಿಗೆ ಕೈ ಜೋಡಿಸಿದರು. ಇಂದು ಅವರು ತಂಡವನ್ನು ರಚಿಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಇದುವರೆಗೆ ಸಾವಿರಾರು ಗುಂಡಿಗಳನ್ನು ಅವರು ಮುಚ್ಚಿದ್ದಾರೆ. ಮಹಾನಗರ ಪಾಲಿಕೆ ಮಾಡಬೇಕಾದ ಕೆಲಸವನ್ನು ಅವರು ಮಾಡಿ ಇತರರಿಗೆ ಪ್ರೇರಣೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.