ಕಂಪಲ: ಉಗಾಂಡಾದೊಂದಿಗೆ ಸಮತೋಲಿತ ವ್ಯಾಪಾರ ಸಂಬಂಧವನ್ನು ಹೊಂದುವ ಸಲುವಾಗಿ ಭಾರತ ಇನ್ನಷ್ಟು ಮೈಲಿಗಳನ್ನು ಪ್ರಯಾಣಿಸಲು ಸಿದ್ಧವಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ-ಉಗಾಂಡಾ ಬ್ಯುಸಿನೆಸ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ-ಉಗಾಂಡಾದ ನಡುವೆ ಅಸಮತೋಲಿತ ವ್ಯಾಪಾರ ಇದೆ ಎಂಬ ಉಗಾಂಡಾ ಅಧ್ಯಕ್ಷ ಮಾತು ಸತ್ಯವಾದುದು. ಸಮತೋಲನ ಸಾಧಿಸಲು ನಾನು ಈಗ ಇಲ್ಲಿಗೆ ಬಂದಿದ್ದೇನೆ ಮತ್ತು ಇಲ್ಲಿಂದ 10 ಹೆಜ್ಜೆ ಮುಂದಕ್ಕೂ ಇಡಲು ನಾನು ಸಿದ್ಧನಿದ್ದೇನೆ’ ಎಂದರು.
ಉಭಯ ರಾಷ್ಟ್ರಗಳೂ ಸರಿಯಾದ ‘ವಿನ್-ವಿನ್’ ಪರಿಸ್ಥಿತಿಯಲ್ಲಿವೆ, ಆದರೆ ಇದರಿಂದ ಹೆಚ್ಚಿನ ಅನುಕೂಲಗಳಿಲ್ಲ. ಮುಂದಕ್ಕೆ ಚಲಿಸಲು ಇನ್ನಷ್ಟು ಯೋಜನಾಬದ್ಧ ತಂತ್ರಗಾರಿಕೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.