ನವದೆಹಲಿ: ದೇಶದ 29 ರಾಜ್ಯಗಳ ಪೈಕಿ 28 ರಾಜ್ಯಗಳಲ್ಲಿ 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಸಿದ್ಧತೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪೂರ್ಣಗೊಳಿಸಿದ್ದಾರೆ. ಕಳೆದ 40 ದಿನಗಳಲ್ಲಿ ಅವರು ಚುನಾವಣಾ ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವಾರಾಂತ್ಯದಲ್ಲಿ ಹಿಮಾಚಲ ಪ್ರದೇಶಕ್ಕೆ ಭೇಟಿ ಕೊಡುವ ಮೂಲಕ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಯ ಮೊದಲ ಹಂತದ ಸಿದ್ಧತೆಯನ್ನು ಸಮಾಪ್ತಿಗೊಳಿಸಲಿದ್ದಾರೆ.
ಅಷ್ಟೇ ಅಲ್ಲದೇ ಬಿಜೆಪಿ ಮುಂದಾಳತ್ವ ವಹಿಸಿಕೊಂಡ ಬಳಿಕ ಇದು ಅವರ ನಾಲ್ಕನೇಯ ದೇಶವ್ಯಾಪಿ ಪ್ರಯಾಣವಾಗಿದೆ. ಪ್ರಯಾಣದ ವೇಳೆ ಅವರು ದೇಶದ ಎಲ್ಲಾ 4 ಸಾವಿರ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸಿದ್ದಾರೆ, ಪ್ರತಿ ರಾಜ್ಯಗಳಲ್ಲಿ ಪಕ್ಷದ ದಲಿತ ಮುಖಂಡರುಗಳೊಂದಿಗೆ, ಸಾಮಾಜಿಕ ಜಾಲತಾಣ ಉಸ್ತುವಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಆಗಸ್ಟ್ 1ರಿಂದ ಚುನಾವಣಾ ಪ್ರಚಾರ ಕಾರ್ಯಗಳನ್ನು ಬಿರಿಸುಗೊಳಿಸುವಂತೆ ಆಯಾ ರಾಜ್ಯಗಳ ಪಕ್ಷದ ಮುಖಂಡರುಗಳಿಗೆ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
‘2019ರ ಚುನಾವಣೆಗೆ ಸಜ್ಜಾಗಿ, ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ, ಬೂತ್ ಕಾರ್ಯವನ್ನು ಆರಂಭಿಸಿ, ನಾವು ಆಗಸ್ಟ್ 1ಕ್ಕೆ ಪೂರ್ಣ ಪ್ರಮಾಣದ ಪ್ರಚಾರ ಆರಂಭಿಸಬೇಕಿದೆ’ ಇದು ಶಾ ಅವರು ಪ್ರತಿ ರಾಜ್ಯಗಳ ಮುಖಂಡರಿಗೆ ನೀಇಡರುವ ಸರಳ ಸೂಚನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.