ಭೋಪಾಲ್: ಹಿಂದಿನ ಸರ್ಕಾರ ಶಿಕ್ಷಣವನ್ನು ರಾಜಕೀಯಗೊಳಿಸಿದೆ ಎಂದು ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಆರೋಪಿಸಿದ್ದು, ಶೀಘ್ರದಲ್ಲೇ ಎನ್ಸಿಇಆರ್ಟಿ ಪಠ್ಯ ಪುಸ್ತಕಗಳಲ್ಲಿನ ರಾಜಕೀಯ ವಿಷಯಗಳನ್ನು ಪರಿಶೀಲನೆಗೊಳಪಡಿಸಲಾಗುವುದು ಎಂದಿದ್ದಾರೆ.
’12ನೇ ತರಗತಿ ಪಠ್ಯದ ‘ಪಾಲಿಟಿಕ್ಸ್ ಆಫ್ ಇಂಡಿಪೆಂಡೆಂಟ್ ಇಂಡಿಯಾ’ ಅಧ್ಯಾಯದಲ್ಲಿ ಬಿಜೆಪಿಯನ್ನು ‘ಹಿಂದುತ್ವ ಅಜೆಂಡಾ’ ಪ್ರತಿಪಾದಿಸುವ ಪಕ್ಷ ಎಂದು ಹೇಳಲಾಗಿದೆ. ಅಲ್ಲದೇ ಗುಜರಾತ್ ಗಲಭೆ, ವಾಜಪೇಯಿ ನರೇಂದ್ರ ಮೋದಿಗೆ ಹೇಳಿದ ರಾಜಧರ್ಮ ಪಾಲನೆಯ ವಿಷಯ ಎಲ್ಲವನ್ನೂ ಹಾಕಲಾಗಿದೆ. ಇದನ್ನು ಬದಲಾಯಿಸುವಂತೆ ಮಧ್ಯಪ್ರದೇಶ ಸರ್ಕಾರ ನಮಗೆ ಮನವಿ ಮಾಡಿದೆ’ ಎಂದಿದ್ದಾರೆ.
2004ರಿಂದ ಎನ್ಸಿಇಆರ್ಟಿ ಪಠ್ಯಗಳಿಗೆ ಬದಲಾವಣೆಗಳನ್ನು ತರಲಾಗಿಲ್ಲ, ಹಿಂದಿನ ಸರ್ಕಾರ ಶಿಕ್ಷಣದಲ್ಲಿ ರಾಜಕೀಯವನ್ನು ತುರುಕಿದ್ದು, ಶೀಘ್ರದಲ್ಲೇ ಅದನ್ನು ಬದಲಾಯಿಸುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.