ನವದೆಹಲಿ: 1999 ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಗಳಿಸಿದ ಸ್ಮರಣಾರ್ಥ ಮಿಲಿಟರಿ ಪೋಲೀಸ್ನ ಮೋಟರ್ಸೈಕಲ್ ಪ್ರದರ್ಶನ ತಂಡ ‘ಶ್ವೇತ ಅಶ್ವ’ ಮೋಟರ್ಸೈಕಲ್ ದಂಡಯಾತ್ರೆಯನ್ನು ಹಮ್ಮಿಕೊಂಡಿದೆ.
ಜುಲೈ 2 ರಂದು ಬೆಂಗಳೂರಿನಲ್ಲಿ ಈ ದಂಡಯಾತ್ರೆಗೆ ಚಾಲನೆ ನೀಡಲಾಗಿದ್ದು ಜುಲೈ 26 ರಂದು ಜಮ್ಮು ಕಾಶ್ಮೀರದಲ್ಲಿ ಇದು ಸಮಾಪನೆಗೊಳ್ಳಲಿದೆ. ರಕ್ಷಣಾ ಸಚಿವಾಲಯದ ಮಾಹಿತಿಯ ಪ್ರಕಾರ ಈ ಮೋಟರ್ಸೈಕಲ್ ತಂಡವು 24 ದಿನಗಳಲ್ಲಿ 3250 ಕಿ.ಮೀ ದಂಡಯಾತ್ರೆ ನಡೆಸಲಿದ್ದು ದೇಶದ 8 ರಾಜ್ಯಗಳಲ್ಲಿ ಸಂಚರಿಸಲಿದೆ.
ದೇಶದಲ್ಲಿನ ಭ್ರಾತೃತ್ವವನ್ನು ಬಲಗೊಳಿಸಿ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ತ್ಯಾಗವನ್ನು ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಸದುದ್ದೇಶದೊಂದಿಗೆ ಈ ದಂಡಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 26 ರಂದು ಜಮ್ಮು ಕಾಶ್ಮೀರದ ದ್ರಾಸ್ನಲ್ಲಿರುವ ಕಾರ್ಗಿಲ್ ವಾರ್ ಮೆಮೋರಿಯಲ್ನಲ್ಲಿ ಈ ದಂಡಯಾತ್ರೆಯು ಸಮಾಪನೆಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.